ತುಮಕೂರು : ಬಿಜೆಪಿಯಲ್ಲಿ ಟಿಕೆಟ್ ಕೈತಪ್ಪಿದವರ ಅಸಮಾಧಾನ ಸ್ಪೋಟಗೊಳ್ಳುತ್ತಿದ್ದು, ಈಶ್ವರಪ್ಪ ನಂತರ ತುಮಕೂರು ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಕೈತಪ್ಪಿದ್ದಕ್ಕೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ದ ಮಾಜಿ ಸಚಿವ ಜೆ.ಸಿ ಮಾಧುಸ್ವಾಮಿ ಅಸಮಾಧಾನ ಹೊರ ಹಾಕಿದ್ದಾರೆ. ನಾನು ವಿ.ಸೋಮಣ್ಣ ಪರ ಕೆಲಸ ಮಾಡಲ್ಲ. ಸೋಮಣ್ಣಗೆ ಟಿಕೆಟ್ ಕೊಟ್ಟಿದ್ದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ. ಅಲ್ಲದೆ ನನಗೆ ಲೋಕಸಭೆ ಚುನಾವನೆಗೆ ಸ್ಪರ್ಧಿಸಿ ಎಂದು ಎರಡು ಮೂರು ಬಾರಿ ಹೇಳಿದ್ದರು. ಲೋಕಸಭೆ ಚುನಾವಣೆಗೆ ಸಿದ್ದರಾಗಿ ಎಂದು ಹೇಳಿದ್ದರು. ಆದರೆ ನನಗೆ ಟಿಕೆಟ್ ಕೊಡಿಸಲು ಬಿಎಸ್ ಯಡಿಯೂರಪ್ಪ ಹೋರಾಡಲಿಲ್ಲ. ಇಲ್ಲೇ ಇರಬೇಕಾ ಎಂಬ ಚಿಂತೆ ಮೂಡುತ್ತಿದೆ. ಬಿಜೆಪಿಯಲ್ಲಿರುವುದು ಸೇಫ್ ಅಲ್ಲ. ಬಿಎಸ್ ವೈ ನಮ್ಮನ್ನೆಲ್ಲಾ ಬಲಿಕೊಟ್ಟರು. ಸೋಮಣ್ಣನ ನಾಲಿಗೆಗೆ ಹೆದರಿ ಟಿಕೆಟ್ ಕೊಟ್ಟಿದ್ದಾರೆ. ಅಪ್ಪಮಕ್ಕಳಿಗೆ ಸ್ವಹಿತಾಸಕ್ತಿಯೇ ಮುಖ್ಯ ಎಂದು ಜೆಸಿ ಮಾಧುಸ್ವಾಮಿ ಕಿಡಿಕಾರಿದರು.