ಮೈಸೂರು: ಕಾರ್ಯಕರ್ತರನ್ನು ಭೇಟಿ ಮಾಡಬೇಕು ಎಂದು ರಾಜರು ಹೇಳಿದ್ದರು. ಆದ್ದರಿಂದ ಈ ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ ಎಂದು ಮೈಸೂರಿನಲ್ಲಿ ಮಾಜಿ ಸಚಿವ ಸಾ.ರಾ.ಮಹೇಶ್ ಹೇಳಿದ್ದಾರೆ. ಯದುವೀರ್ ಒಡೆಯರ್ ಸಾರಾ ಮಹೇಶ್ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಆಗಿತ್ತು. ಆದರೆ ಮಂಡ್ಯದಲ್ಲಿ ನಮಗೆ ಬೆನ್ನಿಗೆ ಚೂರಿ ಹಾಕಿದ್ರು. ನರೇಂದ್ರ ಮೋದಿ ಮತ್ತು ದೇವೇಗೌಡರು ಮೈಸೂರಿಗೆ ಕೊಡುಗೆ ಕೊಟ್ಟವರು. ಕೊಡುಗೆ ಕೊಟ್ಟವರಿಗೆ ನಾವು ಕೊಡುಗೆ ಕೊಡಬೇಕೆಂದು ರಾಜರನ್ನು ನಿಲ್ಲಿಸಿದ್ದಾರೆ. ಮೈಸೂರು ಜಿಲ್ಲೆಯವರೇ ಮುಖ್ಯಮಂತ್ರಿ ಆಗಿದ್ದಾರೆ. ಯದುವೀರ್ ರವರಿಗೆ ದೇವೇಗೌಡರು ಮತ್ತು ಹೆಚ್ ಡಿ ಕುಮಾರ್ ಸ್ವಾಮಿ ಆಶೀರ್ವಾದ ಇದೆ. ಪ್ರತಾಪ್ ಸಿಂಹ 10 ವರ್ಷ ಮಾಡಿರುವ ಅಭಿವೃದ್ದಿ ಕಾರ್ಯ ಈಗ ನಿಮ್ಮ ಮೇಲಿದೆ. ಅತ್ಯಂತ ಮತಗಳ ಅಂತರದಲ್ಲಿ ನೀವು ಗೆಲ್ಲುತ್ತೀರ ನೀವು ಚಿಂತಿಸಬೇಡಿ ಯದುವೀರ್. ಮಹಾರಾಜರಿಗೆ ಅವರದೇ ಆದ ಗೌರವ ಇದೆ. ಜನರಿಗೆ ಏಕೆ ಕೈ ಮುಗಿಬೇಕು ಎಂದು ಜನ ಹೇಳುತ್ತಿದ್ದಾರೆ. ಜನ ಸಾಮಾನ್ಯ ಮದ್ಯ ನಾನು ಜನ ಸಾಮಾನ್ಯ ಎಂದು ಬಂದಿದ್ದೀರಾ ನಾವು ನಿಮ್ಮ ಹಿಂದೆ ಇದ್ದೇವೆ ಎಂದು ಮಾಜಿ ಸಚಿವ ಸಾ.ರಾ ಮೇಹೇಶ್ ಯದುವೀರ್ ರವರಿಗೆ ಧೈರ್ಯ ತುಂಬಿದ್ದಾರೆ.