ಹನೂರು: ತಾಲೂಕಿನ ಲೊಕ್ಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧಿಕಾರತೇರ ಸದಸ್ಯ ಆರ್.ಪಿ.ವಿಷ್ಣುಕುಮಾರ್ ಮಾಜಿ ಶಾಸಕ ಆರ್.ನರೇಂದ್ರ ಅವರನ್ನು ಸನ್ಮಾನಿಸಿದರು.
ನಂತರ ಆರ್.ಪಿ.ವಿಷ್ಣು ಕುಮಾರ್ ಮಾತನಾಡಿ, ಮಾಜಿ ಶಾಸಕ ನರೇಂದ್ರ ಅವರ ಆಶೀರ್ವಾದದಿಂದ ಇಂದು ಈ ಅಧಿಕಾರವನ್ನು ಪಡೆದಿದ್ದೇನೆ. ನಮ್ಮ ತಂದೆ ದಿ.ಪಳನಿಯಪ್ಪ ಲೊಕ್ಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಮೊಟ್ಟಮೊದಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಸಂಘದಲ್ಲಿ 400ಕ್ಕೂ ಹೆಚ್ಚು ಸದಸ್ಯರು ಇದ್ದು, ಇತ್ತೀಚಿನ ದಿನಗಳಲ್ಲಿ ಸಂಘದಲ್ಲಿ ಪಕ್ಷಪಾತ ನಡೆಯುತ್ತಿದೆ, ಸಂಘದ ಎಲ್ಲಾ ಸದಸ್ಯರಿಗೂ ಸಾಲ ನೀಡುವ ಬದಲು ತಮಗೆ ಬೇಕಾದವರಿಗೆ ಮಾತ್ರ ಸಾಲ ನೀಡುತ್ತಿದ್ದಾರೆ. ಇನ್ನು ಕೆಲವರಿಗೆ ಮತದಾನದ ಹಕ್ಕನ್ನೇ ನೀಡಿಲ್ಲ ಈ ಎಲ್ಲಾ ಲೋಪ ದೋಷಗಳನ್ನು ಸರಿಪಡಿಸಲು ಶ್ರಮಿಸುತ್ತೇನೆ ಎಂದರು.
ಪಟ್ಟಣ ಪಂಚಾಯಿತಿ ಸದಸ್ಯರಾದ ಗಿರೀಶ್, ಹರೀಶ್, ಮುಖಂಡರಾದ ಎಲ್.ನಾಗೇಂದ್ರ, ಮಾದೇಶ್ ಎಸ್.ರವಿ ಗೌಡ, ಕುಮಾರ್ ಗೌಡ, ರಾಜು, ನಿಂಗಶೆಟ್ಟಿ, ಪೆದ್ದನ ಪಾಳ್ಯ ಮಣಿ ಹಾಜರಿದ್ದರು.