ಪ್ರತಿನಿಧಿ ವರದಿ ಪಿರಿಯಾಪಟ್ಟಣ
ಜೆ.ಪಿ ನಗರದ ಪುಟ್ಟರಾಜ ಗವಾಯಿ ಸ್ಟೇಡಿಯಂ ನಲ್ಲಿ ಆರಾಧ್ಯ ಸ್ಟ್ರೈಕರ್ಸ್ ತಂಡದ ವತಿಯಿಂದ ಆಯೋಜಿಸಿದ್ದ ಆರಾಧ್ಯ ಪ್ರೀಮಿಯರ್ ಲೀಗ್ ಸೀಸನ್ -2 ಹಾಗೂ ಆರಾಧ್ಯ ಜನಾಂಗದ ವಿವಿಧ ಕ್ಷೇತ್ರಗಳ ಸಾಧಕರಿಗೆ ಹಮ್ಮಿಕೊಂಡಿದ್ದ ಗೌರವ ಸಮರ್ಪಣೆ ಕಾರ್ಯಕ್ರಮವನ್ನು ಶಾಸಕ ಶ್ರೀವತ್ಸ ಅವರು ಉದ್ಘಾಟಿಸಿದರು.
ಶಾಸಕ ಶ್ರೀವತ್ಸ ಮಾತನಾಡಿ ಆರಾಧ್ಯ ಜನಾಂಗದ ಯುವಕರು ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಿರುವುದರ ಜೊತೆಗೆ ಜನಾಂಗದ ವಿವಿಧ ಕ್ಷೇತ್ರದ ಸಾಧಕರನ್ನು ಗೌರವಿಸುತ್ತಿರುವುದು ಶ್ಲಾಘನೀಯ, ಕ್ರೀಡೆಗಳಲ್ಲಿ ಸೋಲು ಗೆಲುವಿಗಿಂತ ಭಾಗವಹಿಸುವಿಕೆ ಮುಖ್ಯ ಇದರಿಂದ ತಮ್ಮಲ್ಲಿರುವ ಪ್ರತಿಭೆ ಹೊರಬರಲು ಸಹಾಯವಾಗುತ್ತದೆ, ಕ್ರೀಡೆ ಹಾಗೂ ಯೋಗವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ದೈಹಿಕ ಹಾಗೂ ಮಾನಸಿಕವಾಗಿ ಸಾಮರ್ಥ್ಯರಾಗಬಹುದು, ಸಮಾಜದ ಅಭಿವೃದ್ಧಿ ವಿಚಾರದಲ್ಲಿ ಜನಪ್ರತಿನಿಧಿಯಾಗಿ ಸದಾ ಜೊತೆಗಿದ್ದು ಕೈಲಾದ ಸಹಾಯ ಮಾಡುತ್ತೇನೆ ಎಂದರು.
ಪಿರಿಯಾಪಟ್ಟಣ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬೆಕ್ಕರೆ ಸತೀಶ್ ಆರಾಧ್ಯ ಮಾತನಾಡಿದರು.
ಶಾಸಕ ಶ್ರೀವತ್ಸ ಅವರು ಬ್ಯಾಟ್ ಬೀಸುವ ಮೂಲಕ ಕ್ರಿಕೆಟ್ ಟೂರ್ನಿಗೆ ಚಾಲನೆ ನೀಡಿದ್ದು ವಿಶೇಷವಾಗಿತ್ತು, ಇದೆ ವೇಳೆ ಆರಾಧ್ಯ ಜನಾಂಗದ ಹಿರಿಯ ಅಂತರಾಷ್ಟ್ರೀಯ ಕ್ರೀಡಾಪಟು ವಿಶ್ವೇಶ್ವರ ಆರಾಧ್ಯ, ರಾಷ್ಟ್ರೀಯ ಯೋಗಪಟು ಕುಮಾರಿ ಕೀರ್ತನಾ, ಸಮಾಜ ಸೇವಕರಾದ ಪುಟ್ಟಬುದ್ಧಿ, ಉದ್ಯಮಿ ವರಲಕ್ಷ್ಮಿ ಕುಮಾರ್, ಕ್ರಿಕೆಟ್ ಟೂರ್ನಿ ಆಯೋಜಿಸಲು ಕಾರಣಕರ್ತರಾದ ಕಿರಣ್ ಕುಮಾರ್, ಮಲ್ಲಿಕಾ ಆರಾಧ್ಯ ಅವರನ್ನು ಸನ್ಮಾನಿಸಲಾಯಿತು, ಟೂರ್ನಿಯಲ್ಲಿ ಒಟ್ಟು 10 ತಂಡಗಳು ಭಾಗವಹಿಸಿದ್ದವು.
ಮುಖಂಡರಾದ ರಾಮಾರಾಧ್ಯ, ಚೇತನ್ ಆರಾಧ್ಯ, ಗುರು ಆರಾಧ್ಯ, ಅಶೋಕ್ ಆರಾಧ್ಯ ಸೇರಿದಂತೆ ವಿವಿಧ ತಂಡಗಳ ನಾಯಕರಾದ ಸುನಿಲ್ ಆರಾಧ್ಯ, ಮಧು ಆರಾಧ್ಯ, ಅವಿನಾಶ್ ಆರಾಧ್ಯ, ಲೋಕೇಶ್ ಆರಾಧ್ಯ, ಅಕ್ಷಿತ್ ಆರಾಧ್ಯ, ಸಂದೀಪ್ ಆರಾಧ್ಯ, ಸೋಮಶೇಖರ್ ಆರಾಧ್ಯ, ದಿನೇಶ್ ಆರಾಧ್ಯ, ಅಭಿಲಾಶ್ ಆರಾಧ್ಯ ಮತ್ತು ಆರಾಧ್ಯ ಸ್ಟ್ರೈಕರ್ಸ್ ತಂಡದ ಸದಸ್ಯರು ಇದ್ದರು.
ಫೋಟೋ
ಮೈಸೂರಿನ ಜೆ.ಪಿ ನಗರದ ಕ್ರೀಡಾಂಗಣದಲ್ಲಿ ಆರಾಧ್ಯ ಸ್ಟ್ರೈಕರ್ಸ್ ತಂಡ ವತಿಯಿಂದ ಆಯೋಜಿಸಿದ್ದ ಆರಾಧ್ಯ ಪ್ರೀಮಿಯರ್ ಲೀಗ್ ಸೀಸನ್ 2 ಕ್ರಿಕೆಟ್ ಟೂರ್ನಿ ಹಾಗೂ ಸಮಾಜದ ಸಾಧಕರಿಗೆ ಗೌರವ ಸಮರ್ಪಣೆ ಕಾರ್ಯಕ್ರಮವನ್ನು ಶಾಸಕರಾದ ಶ್ರೀವತ್ಸ ಅವರು ಉದ್ಘಾಟಿಸಿ ಮಾತನಾಡಿದರು