ಪ್ರತಿನಿಧಿ ವರದಿ ತಿ.ನರಸೀಪುರ
ಪಟ್ಟಣದ ಶ್ರೀ ಗುಂಜಾ ನರಸಿಂಹಸ್ವಾಮಿ ದೇವಾಲಯದಲ್ಲಿ ಹುಂಡಿ ಹಣದ ಎಣಿಕೆ ಕಾರ್ಯವನ್ನು ಮುಜರಾಯಿ ಅಧಿಕಾರಿಗಳ ಸಮ್ಮುಖದಲ್ಲಿ ನಡೆಸಲಾಯಿತು.
ಮುಜರಾಯಿ ಗುಮಾಸ್ತ ಕಿರಣ್ ಮೇಲುಸ್ತುವಾರಿಯಲ್ಲಿ ದೇಗುಲದಲ್ಲಿದ್ದ ಎಲ್ಲ ಹುಂಡಿಗಳನ್ನು ತೆಗೆದು ಹಣ ಎಣಿಕೆ ಕಾರ್ಯ ನಡೆಸಲಾಯಿತು.ಕಳೆದ ಮೂರು ತಿಂಗಳ ಅವಧಿಯಲ್ಲಿ 4,81,300 ರೂಗಳ ಹಣ ಭಕ್ತಾಧಿಗಳಿಂದ ಶೇಖರಣೆ ಆಗಿದೆ ಎಂದು ಮುಜರಾಯಿ ಇಲಾಖೆಯ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಎಣಿಕೆ ಕಾರ್ಯದಲ್ಲಿ ಕಂದಾಯ ನಿರೀಕ್ಷಕ ಮಹೇಂದ್ರ , ಪಾರುಪತ್ತೇದಾರ್ ಯೋಗೀಶ್, ದೀಪು, ನಗದು ಗುಮಾಸ್ತ ಶಿವಕುಮಾರ್, ಪ್ರಧಾನ ಅರ್ಚಕ ಸಂಪತ್ ಕುಮಾರ್ ಭಟ್, ಕೆಬ್ಬೆ ರಮೇಶ್, ಬಿ.ಎಸ್.ಮಹದೇವಪ್ರಸಾದ್, ಬಂಡಿಕಾರ ಯಜಮಾನ ಗಿರೀಶ್, ಕೆಇಬಿ ಯೋಗೇಶ್, ಗ್ರಾಮ ಲೆಕ್ಕಿಗರಾದ ಶ್ರೀನಿವಾಸ್, ವಿಜಯ್, ವೆಂಕಟೇಶ್ ಅನಿತ, ಪ್ರಮೋದ್, ಬಸವರಾಜು, ನಿಂಗರಾಜು, ಶಿವಮಲ್ಲು ಹಾಜರಿದ್ದರು.