ಕೆ.ಎಂ.ದೊಡ್ಡಿ: ನನ್ನ ತಂದೆ ಜಿ.ಮಾದೇಗೌಡ ಜೀವನೂದ್ದಕ್ಕೂ ರಾಜಕೀಯ ಮತ್ತು ಸಾಮಾಜಿಕ ಹೋರಾಟ ಮಾಡಿ ಕೊಂಡು ಬಂದವರು ನಾನು ಸಹ ಯಾವುದೇ ಹೋರಾಟಕ್ಕೂ ಸಿದ್ದನಿದ್ದೆನೆ ಎಂದು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ತಿಳಿಸಿದರು.
ಸಮೀಪದ ಕಾಡು ಕೊತ್ತನಹಳ್ಳಿ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ದೇವಾಸ್ಥಾನ ಜೀರ್ಣೋದ್ಧಾರ ಮತ್ತು ಅಭಿವೃದ್ಧಿ ಸಮಿತಿ ಮತ್ತು ಗ್ರಾಮಸ್ಥರು ಆಯೋಜಿಸಿದ್ದ ಅಭಿನಂದನೆ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ನಿಮ್ಮಗಳ ಜತೆ ಸೇರಿ ಯಾವುದೇ ಹೋರಾಟ ಮಾಡಲು ಸಿದ್ದ ಎಂದರು.
ನನ್ನ ತಂದೆ ಹುಟ್ಟು ಹೋರಾಟಗಾರ ರಾಜಕೀಯದಲ್ಲಿ ಹಲವು ಏಳು ಬೀಳುಗಳನ್ನ ನೋಡಿದ್ದರು ಸಹ ತಮ್ಮ ಛಲ ಬಿಡದೇ ಹಲವು ಸಾಮಾಜಿಕ, ರೈತ ಪರ ಹೋರಾಟ ಮಾಡಿ ತಮ್ಮ ಜೀವ ಸವೆಸಿದ್ದು ಅವರು ಹಾಕಿ ಕೊಟ್ಟ ದಾರಿಯಲ್ಲಿ ನಾನು ನಡೆಯುತ್ತೆನೆ ಎಂದರು.
ಕಳೆದ ಹಲವು ತಿಂಗಳಿಂದ ರಾಜಕೀಯದಿಂದ ಸ್ವಲ್ಪ ದೂರ ಉಳಿದಿದ್ದೆ ನನ್ನ ಅಭಿಮಾನಿಗಳು ಮತ್ತು ಹಿತೈಷಿಗಳು ಪ್ರತಿ ಗ್ರಾಮಗಳಿಗೂ ನನ್ನನ್ನು ಆಹ್ವಾನಿಸುತಿದ್ದಾರೆ. ಅವರ ಆಹ್ವಾನಕ್ಕೆ ಬೆಲೆ ಕೊಟ್ಟು ಗ್ರಾಮಗಳಿಗೆ ತೆರಳಿ ಅವರ ಕಷ್ಟ-ಸುಖಃಗಳಿಗೆ ಸ್ಪಂದಿಸುವ ಕೆಲಸ ಮಾಡುತಿದ್ದೆನೆ ಎಂದು ಹೇಳಿದರು.
ಸರಕಾರಿ ಇಲಾಖೆಯಲ್ಲಿ ನಿಮ್ಮ ಕೆಲಸಗಳು ಆಗಬೇಕಾದರೇ ನೆರವಾಗಿ ನನ್ನನ್ನು ಭೇಟಿ ಮಾಡಿ ನಿಮ್ಮಗಳ ಸಮಸ್ಯೆಗಳಿಗೆ ನಾನು ಸ್ಪಂದಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತ ನಿಮ್ಮ ಬೆಂಬಲಕ್ಕೆ ನಾನು ನಿಲ್ಲುತ್ತೆನೆ ಎಂದರು.
ಕಾಡುಕೊತ್ತನಹಳ್ಳಿ ಗ್ರಾಮಕ್ಕೂ ನನ್ನ ತಂದೆಗೂ ಅವಿನಾಭಾವ ಸಂಬಂಧ ಇತ್ತು ಪ್ರತಿ ಬಾರಿಯು ನನ್ನ ತಂದೆಯನ್ನು ಬೆಂಬಲಿಸಿದ್ದು, ಪರಿಷತ್ ಚುನಾವಣೆಯಲ್ಲೂ ನನಗೆ ಹೆಚ್ಚಿನ ಮತ ನೀಡಿರುವ ನಿಮ್ಮ ಗ್ರಾಮದ ಅಭಿವೃದ್ಧಿಗೆ ನಿಮ್ಮ ಜತೆ ಇರುತ್ತೆನೆ. ನನ್ನ ಪರಿಷತ್ ಅವಧಿ ಇನ್ನು ೫ ವರ್ಷಗಳಿದ್ದು ಅಲ್ಲಿಯ ವರೆಗೆ ನನ್ನ ಅನುಧಾನವನ್ನು ನಿಮ್ಮ ಗ್ರಾಮದ ಅಭಿವೃದ್ಧಿಗೆ ನೀಡುತ್ತೆನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಟ್ಟನಹಳ್ಳಿ ಶಿವಲಿಂಗೇಗೌಡ, ಗ್ರಾ.ಪಂ ಮಾಜಿ ಅಧ್ಯಕ್ಷ ಕೆ.ಎಸ್.ದಯಾನಂದ್, ಮಾಜಿ ಸದಸ್ಯ ಕರೀಗೌಡ, ಮುಖಂಡರಾದಜಯರಾಜು, ರಾಜೇಂದ್ರಸ್ವಾಮಿ, ದೇವಿಪ್ರಸಾದ್, ಜಗದೀಶ್, ಸ್ವಾಮಿ, ನಂಜುಂಡಸ್ವಾಮಿ ಮತ್ತಿತರಿದ್ದರು.
೧೮ಏಒಆ-೧ ಕಾಡುಕೊತ್ತನಹಳ್ಳಿ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ದೇವಾಸ್ಥಾನ ಜೀರ್ಣೋದ್ಧಾರ ಮತ್ತು ಅಭಿವೃದ್ಧಿ ಸಮಿತಿ ಮತ್ತು ಗ್ರಾಮಸ್ಥರು ಆಯೋಜಿಸಿದ್ದ ಅಭಿನಂದನೆ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಅಭಿನಂದನೆ ಸ್ವೀಕರಿಸಿದರು.