ಪ್ರತಿನಿಧಿ ವರದಿ ತಲಕಾಡು
ತಿಂಗಳ ಹಿಂದೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಕಾವೇರಿಪುರ ಗ್ರಾಮದ ದಿ.ಸುರೇಂದ್ರ ಅವರ ಪತ್ನಿ ಶಾರದಮ್ಮ ಫಲಾನುಭವಿಯಾಗಿದ್ದು, ಅವರಿಗೆ ತಲಕಾಡು ಅಂಚೆಕಚೇರಿಯಲ್ಲಿ 10 ಲಕ್ಷ ರೂ.ಮೌಲ್ಯದ ಅಪಘಾತ ವಿಮಾ ಪಾಲಿಸಿ ಚೆಕ್ ವಿತರಿಸಿದರು.
ಮೃತರು ಇಲ್ಲಿನ ಅಂಚೆಕಚೇರಿಯಲ್ಲಿ ಟಾಟಾ ಐಎನ್ ಜಿ ಎಂಬ ಅಪಘಾತ ವಿಮೆ ಪಾಲಿಸಿ ಮಾಡಿಸಿದ್ದರು. ಜಿಲ್ಲಾ ಅಂಚೆಕಚೇರಿಯ ಅಧ್ಯಕ್ಷ ಎನ್.ಗೋವಿಂದರಾಜು ಫಲಾನುಭವಿಗೆ ಪಾಲಿಸಿ ಚೆಕ್ ನೀಡಿದರು.
ದಿವಾಕರ್, ಸುರೇಶ್ , ಸುಧಾಕರ್, ಟಿ.ನರಸೀಪುರ ಅಂಚೆ ನಿರೀಕ್ಷಕ ಸುಪ್ರಿಯ, ತಲಕಾಡು ಅಂಚೆ ಇಲಾಖೆಯ ಪೋಸ್ಟ್ ಮಾಸ್ಟರ್ ಮಹದೇವಸ್ವಾಮಿ, ಶಶಿಕುಮಾರ್, ಸೋಮಶೇಖರ್ ಪೋಸ್ಟ್ ಮ್ಯಾನ್ ಕೃಷ್ಣಮೂರ್ತಿ, ತಮಿಳು ಸೆಲ್ವಿ, ರಾಘವಾನ್ ಇತರರು ಇದ್ದರು.
ಚಿತ್ರಶೀರ್ಷಿಕೆ 1,2
ತಲಕಾಡು ಅಂಚೆ ಕಚೇರಿಯಲ್ಲಿ ಮಂಗಳವಾರ ಅಪಘಾತ ವಿಮೆ 10 ಲಕ್ಷ ರೂ.ಗಳ ಚೆಕ್ ಅನ್ನು ಕಾವೇರಿಪುರ ಗ್ರಾಮದ ಶಾರದಮ್ಮ ಅವರಿಗೆ ಜಿಲ್ಲಾ ಅಂಚೆ ಅಧೀಕ್ಷಕರಾದ ಎನ್. ಗೋವಿಂದರಾಜು ವಿತರಿಸಿದರು.