ಪ್ರತಿನಿಧಿ ವರದಿ ತಿ.ನರಸೀಪುರ
ತಾಲೂಕಿನ ಅಂಕನಹಳ್ಳಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಎನ್.ಶಿವಮಾದಯ್ಯ ಅವಿರೋಧವಾಗಿ ಆಯ್ಕೆಯಾದರು.
ನಿಕಟಪೂರ್ವ ಅಧ್ಯಕ್ಷ ಸೋಮಶೇಖರ್ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕಾಗಿ ಶಿವಮಾದಯ್ಯ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದ ಪರಿಣಾಮ ಅವರೇ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಜ್ಯೋತಿ ಮುಂದುವರಿದರು.
ಇದೇ ವೇಳೆ ಮಾತನಾಡಿದ ನೂತನ ಅಧ್ಯಕ್ಷರು, ಈಗಾಗಲೇ ಬೇಸಿಗೆ ಬಿಸಿಲು ಜಾಸ್ತಿಯಾಗಿದ್ದು, ಕೆರೆ ಕಟ್ಟೆಗಳು ಒಣಗಿ ಹೋಗಿವೆ. ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾದಂತೆ ನಿಗಾವಹಿಸಲಾಗುವುದು. ಅಲ್ಲದೆ, ಮೂಲ ಸೌಕರ್ಯಗಳನ್ನು ಒದಗಿಸುವ ಕಡೆ ಹೆಚ್ಚು ಗಮನಹರಿಸಲಾಗುವುದು ಎಂದರು.
ಉಪಾಧ್ಯಕ್ಷೆ ಜ್ಯೋತಿ,ಕಾಂಗ್ರೆಸ್ ಮುಖಂಡ ಸ್ವಾಮೀಗೌಡ, ನಿಕಟಪೂರ್ವ ಅಧ್ಯಕ್ಷ ಸೋಮಶೇಖರ್, ಶಿವಮ್ಮ, ಹೊಂಬಮ್ಮ, ನಿಂಗಯ್ಯ, ಜಯಲಕ್ಷ್ಮಿ, ಸವಿತಾ, ಸಂಗೀತ, ನಾಗರಾಜು, ಪುಟ್ಟಸ್ವಾಮಿ, ಪುಷ್ಪ, ಸವಿತಾ, ಚೆನ್ನಮ್ಮ, ಶಿವಮ್ಮ, ಶಂಕರ್ ಕುಮಾರ್, ಮಹೇಶ, ಮುಖಂಡರಾದ ಕೆ. ಸಿ.ಮಾದೇವ್ ಮೆಣಸಿಕ್ಯಾತನಹಳ್ಳಿ ಮಹದೇವ್ , ದೊರಸ್ವಾಮಿ, ಮುದ್ದೇಗೌಡ, ಅಂಕನಹಳ್ಳಿ ಮಾದೇವ್, ಕರಿಹುರಳಿ ಕೊಪ್ಪಲು ಶಿವು, ದೊಡ್ಡಮಲಗೂಡು ರಾಮಕೃಷ್ಣ, ಡಿ.ಎಸ್. ಮಲ್ಲೇಶ್, ಅಶೋಕ್, ಪುರುಷೋತ್ತಮ್, ಮುಂತಾದವರು ಹಾಜರಿದ್ದರು.