ಪ್ರತಿನಿಧಿ ವರದಿ ತಿ.ನರಸೀಪುರ
ಕರ್ನಾಟಕ ರಾಜಕೀಯ ಇತಿಹಾಸದಲ್ಲೇ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅತ್ಯಂತ ದುರ್ಬಲ ಮುಖ್ಯಮಂತ್ರಿ ಎಂದು ಹಿರಿಯ ಆರ್. ಎಸ್. ಎಸ್. ಮುಖಂಡ ತೋಟದಪ್ಪ ಬಸವರಾಜು ಕಟುವಾಗಿ ಟೀಕಿಸಿದ್ದಾರೆ.
ಸುದ್ಧಿಗಾರರ ಜೊತೆ ಮಾತನಾಡಿ, 2023ರ ವಿಧಾನ ಸಭಾ ಚುನಾವಣೆಯಲ್ಲಿ ವೈಯುಕ್ತಿಕ ವರ್ಚಸ್ಸಿನ ಮೇಲೆ ಗೆಲ್ಲಲಾಗದೆ ಒಂದು ಓಟಿಗೆ ಎರಡು ಸಾವಿರ ರೂಗಳನ್ನು ನೀಡಿ ಮತ ಖರೀದಿಸಿ ಗೆದ್ದಿದ್ದಾರೆ. ಇದು ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯೊಬ್ಬ ವೋಟಿಗೆ ಹಣಕೊಟ್ಟು ಗೆದ್ದಿರುವುದು. ಗೆದ್ದ ನಂತರ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ನಿಗಾವಹಿಸಿದೆ ನಿರ್ಲಕ್ಷ್ಯ ವಹಿಸಿದ್ದಾರೆ. ಕಾಂಗ್ರೆಸ್ಸಿಗರು ಸಿದ್ದರಾಮಯ್ಯ ಅವರನ್ನು ಬಲಿಷ್ಠ ಮುಖ್ಯಮಂತ್ರಿ ಎಂದು ಅಲ್ಲಲ್ಲಿ ಹೇಳಿಕೆ ನೀಡುತ್ತಿದ್ದು, ನಿಜಕ್ಕೂ ಅವರು ಬಲಿಷ್ಠ ಮುಖ್ಯಮಂತ್ರಿಯಾಗಿದ್ದರೆ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಸ್ವತಃ ಅವರೇ ಸ್ಪರ್ಧಿಸಿ ಗೆದ್ದು ತೋರಿಸಲಿ ಎಂದು ಸವಾಲೆಸದರು.
ವರುಣಾ ಕ್ಷೇತ್ರದಿಂದ ಗೆದ್ದು ಹೋದ ಮೇಲೆ ಕ್ಷೇತ್ರದ ಅಭಿವೃದ್ಧಿ ಮತ್ತು ಜನತೆಯ ಬಗ್ಗೆ ಯಾವುದೇ ಕಾಳಜಿ ಇಲ್ಲ. ಬಜೆಟ್ ನಲ್ಲೂ ವರುಣಾ ಕ್ಷೇತ್ರಕ್ಕೆ ಯಾವುದೇ ಆಮೂಲಾಗ್ರ ಆನುದಾನವನ್ನು ಕೊಟ್ಟಿಲ್ಲ. ಹಾಗಾಗಿ ಇತ್ತೀಚಿನ ದಿನಗಳಲ್ಲಿ ಮುಖ್ಯಮಂತ್ರಿಗಳಲ್ಲಿ ರಾಜಕೀಯ ಇಚ್ಚಾಸಕ್ತಿ ಕೊರತೆ ಕಾಣುತ್ತಿದೆ. ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಎಸ್.ಬಾಲರಾಜ್ ಸರಳ ಸಜ್ಜನಿಕೆ, ಜನಪರ ವ್ಯಕ್ತಿತ್ವ ಉಳ್ಳವರಾಗಿದ್ದು ಇವರನ್ನು ಮತದಾರರು ಬೆಂಬಲಿಸಬೇಕು ಎಂದು ಮನವಿ ಮಾಡಿದ್ದಾರೆ
ನರೇಂದ್ರ ಮೋದಿ ಅವರು ದೇಶ ಕಂಡಂತ ಅತ್ಯಂತ ಬಲಿಷ್ಟ ಪ್ರಧಾನ ಮಂತ್ರಿ. ಅವರ ದೂರದೃಷ್ಟಿ ಆಡಳಿತದ ಮುಖೇನ ವಿಶಿಷ್ಟ, ಉತ್ಕೃಷ್ಟ, ಅತ್ಯುತ್ತಮ ಪ್ರಧಾನ ಮಂತ್ರಿಯಾಗಿ ಹೊರಹೊಮ್ಮಿದ್ದಾರೆ. ವಿಶ್ವದಾದ್ಯಂತ ಎಲ್ಲ ನಾಯಕರು ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗಬೇಕು ಎಂಬ ಆಶಯ ವ್ಯಕ್ತಪಡಿಸಿದ್ದಾರೆ. ಇವರನ್ನು ಹಿಮೆಟ್ಟಿಸುವ ಶಕ್ತಿ ಯಾವ ಕಾಂಗ್ರೆಸ್ ನಾಯಕರಿಗೂ ಇಲ್ಲ ಎಂದರು