ಪ್ರತಿನಿಧಿ ವರದಿ ಕೊಳ್ಳೇಗಾಲ
ಪಟ್ಟಣದಲ್ಲಿ ಶುಕ್ರವಾರ ಬೆಳಗ್ಗೆ 9.40 ರಿಂದ 10.30 ಗಂಟೆವರೆಗೆ ಸಲ್ಲುವ ಶುಭ ವೃಷಭ ಲಗ್ನದಲ್ಲಿ ಶ್ರೀ ಮೀನಾಕ್ಷಿ ಸಮೇತ ಶ್ರೀಮರಳೇಶ್ವರಸ್ವಾಮಿ ಬ್ರಹ್ಮ ರಥೋತ್ಸವ ನಡೆಯಲಿದೆ.
ಬ್ರಹ್ಮ ರಥೋತ್ಸವದ ಹಿನ್ನೆಲೆ ಶ್ರೀಮರಳೇಶ್ವರಸ್ವಾಮಿ ದೇವಸ್ಥಾನದಲ್ಲಿ ಬೆಳಗ್ಗೆ ಶ್ರೀಸ್ವಾಮಿಗೆ ರುದ್ರಾಭಿಷೇಕ, ಶಿವಯಾಗ ಪೂಜೆ ಜರುಗಲಿದೆ. ನಂತರ ದೇಗುಲದ ಪ್ರಧಾನ ಅರ್ಚಕ ಡಾ.ನಾಗೇಂದ್ರ ಎನ್.ಭಟ್ ಹಾಗೂ ಸಹಾಯಕ ಅರ್ಚಕರಾದ ಶಿವರಾಮು ಅವರ ನೇತೃತ್ವದಲ್ಲಿ ವಿಶೇಷ ಪೂಜೆ ಹಾಗೂ ರಥೋತ್ಸವಾಗಲಿದೆ.
ಶ್ರೀಸ್ವಾಮಿಯ ದಿವ್ಯ ರಥೋತ್ಸವದ ಹಿನ್ನೆಲೆ ಮಾ.15 ರಿಂದ ಶ್ರೀ ಮರಳೇಶ್ವರಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಗಳು ಹಾಗೂ ವಿವಿಧ ಉತ್ಸವಗಳು ಆರಂಭಗೊಂಡಿದೆ. ಮಾ.15ರಂದು ಗಣಪತಿ ಪ್ರಾರ್ಥನೆಯೊಂದಿಗೆ ಪೂಜೆ ಪ್ರಾರಂಭಗೊಂಡಿದ್ದು, ಮಾ.25ರವರೆಗೆ ನಡೆಯಲಿದೆ.
ಮಾ.20ರಂದು ರಾತ್ರಿ ಗಿರಿಜಾ ಕಲ್ಯಾಣೋತ್ಸವ ಜರುಗಿದ್ದು, ಗುರುವಾರ ಬೆಳಗ್ಗೆ ಶಿವಯಾಗ ಪೂಜಾ, ಬಲಿ ಪ್ರಧಾನ, ಉತ್ಸವ, ಶಿವಯಾಗ ಪೂಜಾ, ಬಲಿ ವಸಂತೋತ್ಸವ ಭೇರಿ ತಾಂಡನ, ಗಜಾರೋಹಣೋತ್ಸವಾಗಿದೆ. ಅಂತೆಯೇ, ಮಾ.23 ರಂದು ರಾತ್ರಿ ಶಯನೋತ್ಸವ, ಮಾ.24 ರಂದು ಬೆಳಗ್ಗೆ ಅಶ್ವವಾಹನೋತ್ಸವ ಪಾರ್ವತಿ ಪ್ರಯಣ ಕಲಹ ಸಂಧಾನ ಸೇವೆ ನಡೆಯಲಿದ್ದು, ಮಾ.25 ರಂದು ಬೆಳಗ್ಗೆ ಮಹಾಭಿಷೇಕ, ರಾತ್ರಿ ನಂದಿವಾಹನೋತ್ಸವ ಮತ್ತು ದ್ವಾದಶಾರಾಧನ ಗಾರೇ ಬಸವೇಶ್ವರೋತ್ಸವದೊಂದಿಗೆ ವಿಶೇಷ ಪೂಜೆ ಮುಕ್ತಾಯವಾಗಲಿದೆ.
21ಕೆಜಿಎಲ್-1
ಫೋಟೋ ಶೀರ್ಷಿಕೆ:
ಕೊಳ್ಳೇಗಾಲ ಪಟ್ಟಣದ ಶ್ರೀ ಮೀನಾಕ್ಷಿ ಸಮೇತ ಶ್ರೀ ಮರಳೇಶ್ವರಸ್ವಾಮಿ ದೇವಸ್ಥಾನದ ಫೋಟೋ ಇದೆ.