ಪ್ರತಿನಿಧಿ ವರದಿ ಹುಣಸೂರು
ಲೋಕಸಭಾ ಚುನಾವಣೆಗೆ ತಾಲೂಕಿನಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ಮತ್ತು ಚುಣಾವಣಾ ನೀತಿಸಂಹಿತೆ ಉಲ್ಲಂಘನೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಉಪವಿಭಾಗಾಧಿಕಾರಿ ಮತ್ತು ಸಹಾಯಕ ಚುನಾವಣಾಧಿಕಾರಿ ಮಹಮದ್ ಹ್ಯಾರಿಸ್ ಸುಮೇರ್ ತಿಳಿಸಿದರು.
ನಗರದ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಸುದ್ಧಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ಶಾಂತಿಯುತ ಮತ್ತು ಪಾರದರ್ಶಕ ಚುನಾವಣೆ ನಡೆಯಲು ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ. ಹುಣಸೂರು ವಿಧಾನಸಭಾ ಕ್ಷೇತ್ರ (೨೧೨)ದಲ್ಲಿ ಒಟ್ಟು ೨.೪೬.೫೫೯ ಮತದಾರರಿದ್ದಾರೆ. ಈ ಪೈಕಿ ೧.೨೨.೩೦೫ ಪುರುಷರು, ೧.೨೪.೨೩೮ ಮಹಿಳಾ ಮತದಾರರಿದ್ದಾರೆ. ಚುನಾವಣಾ ಕರ್ತವ್ಯದಲ್ಲಿರುವ ೨೬೬ ಪುರುಷ ಮತ್ತು ೭ ಮಹಿಳಾ ಮತದಾರರಿದ್ದಾರೆ.
೫೮೭೮ ಯುವಮತದಾರರು(೩೧೬೫ ಯುವಕರು, ೨೭೧೧ ಯುವತಿಯರು) ಇದ್ದು, ೮೫ ವರ್ಷ ಮೇಲ್ಪಟ್ಟ ೩೯೨೮ ಮತದಾರರು(೧೫೬೭ ಪುರುಷ ಹಾಗೂ ೨೩೬೧ ಮಹಿಳಾ ಮತದಾರರು) ಇದ್ದಾರೆ. ೩೬೭೬ ವಿಶೇಷಚೇತನ ಮತದಾರರು(೨೨೫೬ ಪುರುಷರು ಹಾಗೂ೧೪೧೯ ಮಹಿಳಾ ಮತದಾರರು) ಇದ್ದಾರೆ. ತಾಲೂಕಿನಲ್ಲಿ ೨೭೪ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಈ ಪೈಕಿ ೪೧ ಮತಗಟ್ಟೆಗಳು ನಗರವ್ಯಾಪ್ತಿಯಲ್ಲಿ ಇರಲಿವೆ. ಮತದಾನ ಪ್ರಕ್ರಿಯೆಯಲ್ಲಿ ಒಟ್ಟು ೧೦೯೬ ಸಿಬ್ಬಂದಿ ಮತ್ತು ಅಧಿಕಾರಿವರ್ಗ ಭಾಗವಹಿಸಲಿದೆ ಎಂದುತಿಳಿಸಿದರು.
ವಿಧಾನಸಭಾ ಕ್ಷೇತ್ರದಲ್ಲಿ ಮಂಗಳೂರು ಮಾಳ ಗ್ರಾಮದ ಮತಗಟ್ಟೆಯು(ಮ.ಸಂಖ್ಯೆ ೧೧೧, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ) ಅತಿಹೆಚ್ಚು ಮತದಾರರನ್ನು ೧೫೧೫ ಹೊಂದಿದ್ದು, ಮತಗಟ್ಟೆ ಸಂಖ್ಯೆ ೨೬೪, ಚಿಕ್ಕಪಡುವಕೋಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯು ಅತಿ ಕಡಿಮೆ ೨೨೮ ಮತದಾರರನ್ನು ಹೊಂದಿದೆ. ೨೦೧೯ರ ಲೋಕಸಭಾ ಚುನಾವಣೆ ವೇಳೆ ತಾಲೂಕಿನಲ್ಲಿ ಶೇ.೭೭.೨೪ರ ಪ್ರಮಾಣದ ಮತದಾನವಾಗಿತ್ತು. ಈ ಬಾರಿ ಶೇ.೮೫ರ ಪ್ರಮಾಣದಲ್ಲಿ ಮತದಾನವಾಗುವ ನಿರೀಕ್ಷೆಯನ್ನು ಹೊಂದಿದ್ದು ಅದಕ್ಕೆ ಅನುಗುಣವಾಗಿ ಅರಿವು ಮೂಡಿಸುವ ಕಾರ್ಯ ನಡೆಸಲಾಗುವುದು ಎಂದು ತಿಳಿಸಿದರು.
ತಾಲೂಕಿನಲ್ಲಿ ಚುನಾವಣಾ ನೀತಿ ಸಂಹಿತೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ತಾಲೂಕಿನ 4 ದಿಕ್ಕಿನಲ್ಲಿ ಚೆಕ್ಪೋಸ್ಟ್ ಗಳನ್ನು ಸ್ಥಾಪಿಸಲಾಗಿದೆ. ಹುಣಸೂರು ಮೈಸೂರು ಮುಖ್ಯರಸ್ತೆಯ ಮನುಗನಹಳ್ಳಿ, ಹುಣಸೂರು ಎಚ್.ಡಿ.ಕೋಟೆ, ಮುಖ್ಯರಸ್ತೆಯ ಉಮ್ಮತ್ತೂರು, ಹುಣಸೂರು ಕೆ.ಆರ್.ನಗರ ಮುಖ್ಯರಸ್ತೆಯ ಗಾವಡಗೆರೆ ಹೋಬಳಿ ವ್ಯಾಪ್ತಿಯ ಚಿಕ್ಕಾಡಿಗನಹಳ್ಳಿ ಮತ್ತು ಹುಣಸೂರು ಮಡಿಕೇರಿ ಮುಖ್ಯರಸ್ತೆಯ ಮುತ್ತುರಾಯನಹೊಸಳ್ಳಿಯಲ್ಲಿ ಚೆಕ್ಪೋಸ್ಟ್ ಗಳನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದರು.
ತಾಲೂಕಿನಲ್ಲಿ ೫ ಫ್ಲೆಯಿಂಗ್ ಸ್ಕ್ವಾರ್ಡ್ ತಂಡಗಳು, ೪ ಸ್ಟಾಟಿಕ್ ಸರ್ವೇಲೆನ್ಸ್ ಟೀಮ್, ೨ ವೀಡಿಯೋ ಸರ್ವೇಲೆನ್ಸ್ ಟೀಮ್, ತಲಾ ಒಂದು ಅಕೌಂಟಿಂಗ್ ಮತ್ತು ವೀಡಿಯೋ ಪರಿಶೀಲನಾ ತಂಡ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಕ್ರಮವಹಿಸಲಿದೆ ಎಂದರು. ತಾಲೂಕಿನಲ್ಲಿ ಮೂರು ಮತಗಟ್ಟೆಗಳನ್ನು ವಲ್ನರಬಲ್ ಮತಗಟ್ಟೆಗಳು ಮತ್ತು ೫೫ ಕ್ರಿಟಿಕಲ್ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಮಸ್ಟರಿಂಗ್ ಮತ್ತು ಡಿ ಮಸ್ಟರಿಂಗ್ ಕಾರ್ಯಗಳು ನಗರದ ಸಂತ ಜೋಸೆಫರ ವಿದ್ಯಾಸಂಸ್ಥೆಯಲ್ಲಿ ನಡೆಯಲಿದೆ. ಫ್ಲೆಯಿಂಗ್ ಸ್ಕ್ವಾರ್ಡ್ನ್ ನ್ನು ಕೂಡ ಇದೇ ಶಾಲೆಯಲ್ಲಿ ಸ್ಥಾಪಿಸಲಾಗುವುದೆಂದರು.ಸಭೆಯಲ್ಲಿ ತಹಸೀಲ್ದಾರ್ ಡಾ.ಎಂ.ನಯನಾ, ನಗರಸಭೆ ಪೌರಾಯುಕ್ತೆ ಎಂ.ಲಕ್ಷ್ಮೀ, ಉಪವಿಭಾಗಾಧಿಕಾರಿ ಕಚೇರಿ ತಹಸೀಲ್ದಾರ್ ಯದುಗಿರೀಶ್, ಉಪತಹಸೀಲ್ದಾರ್ ನರಸಿಂಹಯ್ಯ ಇದ್ದರು.
೨೨ಊUಓ೫; ಹುಣಸೂರು ಉಪವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಸಹಾಯಕ ಚುನಾವಣಾಧಿಕಾರಿ ಮಹಮದ್ ಹ್ಯಾರಿಸ್ ಸುಮೇರ್ ಚುನಾವಣಾ ತಯಾರಿ ಕುರಿತಂತೆ ಮಾಹಿತಿ ನೀಡಿದರು. ಇಒ ಶಿವಕುಮಾರ್, ತಹಸೀಲ್ದಾರ್ ಡಾ.ಎಂ.ನಯನ, ಪೌರಾಯುಕ್ತೆ ಎಂ.ಲಕ್ಷ್ಮೀ ಇದ್ದಾರೆ.