ಸಂತೋಷ್ ಮನೋಹರ್ ಹೂಗಾರ್ ಅಭಿಪ್ರಾಯ
ಮಂಡ್ಯ : ಜೈವಿಕ ಸರಪಳಿ ಗಟ್ಟಿಯಾಗಬೇಕಾದರೆ ಸಸ್ಯ ಪ್ರಬೇಧಗಳು ನಶಿಸದಂತೆ ಎಚ್ಚರ ವಹಿಸುವುದು ಅಗತ್ಯ ಎಂದು ಮೈಸೂರು ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ಸಂತೋಷ್ ಮನೋಹರ್ ಹೂಗಾರ್ ತಿಳಿಸಿದರು.
ಪರಿಸರ ರೂರಲ್ ಡೆವಲಪ್ಮೆಂಟ್ ಸೊಸೈಟಿ, ಮೈಸೂರು ವಿಶ್ವವಿದ್ಯಾನಿಲಯದ ಬನ್ನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ಎನ್ಎಸ್ ಘಟಕ, ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ವತಿಯಿಂದ ಶ್ರೀರಂಗಪಟ್ಟಣ ತಾಲೂಕಿನ ಗೆಂಡೆಹೊಸಹಳ್ಳಿ ಗ್ರಾಮದ ಪಕ್ಷಿಧಾಮದಲ್ಲಿ ವಿಶ್ವ ಅರಣ್ಯ ದಿನ-ವಿಶ್ವ ಜಲದಿನದ ನಿಮಿತ್ತ ಪರಿಸರ ನಡಿಗೆಯ ತರಬೇತಿ ಕರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ವನ್ಯಜೀವಿಗಳ ಆಹಾರದ ಮೂಲಗಳು ಕಾಡುಗಳಾಗಿವೆ. ಕಾಡುಗಳ ನಶಿಸುವಿಕೆಯಿಂದ ವನ್ಯಜೀವಿಗಳು ಆತಂಕದಲ್ಲಿವೆ. ಇದರಿಂದ ಮಾನವ ಸರಪಳಿಯಾಗಿರುವ ಜೀವ ಸಂಕುಲಕ್ಕೆ ಅಪಾಯ ತಲೆದೋರುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಜಾಗತಿಕ ತಾಪಮಾನ ತಡೆಗೆ ಪರಿಣಾಮಕಾರಿ ಕ್ರಮಗಳನ್ನು ವಿಶ್ವದ ಅಭಿವೃದ್ಧಿಶೀಲ ರಾಷ್ಟçಗಳು ಕ್ರಮ ಕೈಗೊಂಡಿದ್ದರೂ, ಅದರ ಸುಸ್ಥಿರತೆ ಬಗ್ಗೆ ಆಶಾ ಭಾವನೆ ಉಂಟಾಗಿಲ್ಲ ಎಂದು ವಿಷಾದಿಸಿದರು.
ಪ್ರಸ್ತುತ ಯುವಜನರು ಅತ್ಯಂತ ನಿರ್ಲಕ್ಷ್ಯ ದಿಂದ ಪರಿಸರ ನಾಶದ ಬಗ್ಗೆ ವರ್ತಿಸುತ್ತಿದ್ದಾರೆ. ಜಲಕ್ಷಾಮದಂತಹ ಘಟನೆಗಳು ಇಂದು ಜರುಗುತ್ತಿರಬೇಕಾದರೆ ಮನುಷ್ಯನ ದುರಾಸೆಯೇ ಕಾರಣವಾಗಿದೆ. ಇದರ ಭಾಗವಾಗಿ ಇಂದು ನಾಡಿನಾದ್ಯಂತ ಜಲಕ್ಷಾಮ ತಲೆದೋರಿದೆ ಎಂದರು.
ಅಮೆಜಾನ್ ಕಾಡುಗಳು ಯಾವ ರೀತಿ ಹಸಿರೀಕರಣ ಮಾಡಲಾಗಿದೆಯೋ ಹಾಗೆ ಗೆಂಡೆಹೊಸಹಳ್ಳಿ ಪಕ್ಷಿಧಾಮ ಅತ್ಯಂತ ಸುಶ್ರಾವ್ಯವಾಗಿರುತ್ತದೆ. ಹಸಿರು ಹೊದಿಕೆ ಹೆಚ್ಚಿರುತ್ತದೆ. ಈ ಭಾಗದಲ್ಲಿ ಪಕ್ಷಿಧಾಮ, ರಂಗನತಿಟ್ಟು ಪಕ್ಷಿಧಾಮದ ಉಪ ಭಾಗಗಳಾಗಿದ್ದು, ಇವೆರೆಡೂ ವಿಶ್ವಕ್ಕೇ ಮಾದರಿಯಾದ ಪಕ್ಷಿಧಾಮವಾಗಿವೆ. ಇದರ ಉಳಿವಿಗೆ ಸ್ಥಳೀಯ ಜನರು ಮತ್ತು ಪ್ರಜ್ಞಾವಂತರು ಮುಂದಾಗಬೇಕು ಎಂದು ಕರೆ ನೀಡಿದರು.
ಉಪ ವಲಯ ಅರಣ್ಯಾಧಿಕಾರಿ ಲಕ್ಷ್ಮೀದೇವಿ ಮಾತನಾಡಿ, ಜಲ ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಸಲಹೆ ನೀಡಿದರು.
ಮನುಷ್ಯ ತನ್ನ ಸ್ವಾರ್ಥದಿಂದಾಗಿ ಜಲಮಾಲಿನ್ಯ ಉಂಟಾಗುತ್ತಿದೆ. ಇದರಿಂದಾಗಿ ಜಲಚರ ಜೀವಿಗಳಿಗೆ ತೊಂದರೆಯಾಗುವುದರ ಜೊತೆಗೆ ಮನುಷ್ಯನ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ ಎಂದ ಅವರು, ನದಿ, ಹಳ್ಳ, ಕೊಳ್ಳ, ಕಾಲುವೆಗಳಲ್ಲಿ ಸ್ನಾನ ಮಾಡುವ ವೇಳೆ ಸೋಪು, ಸ್ಯಾಂಪೋಗಳAತಹ ರಾಸಾಯನಿಕಗಳನ್ನು ಬಳಸುತ್ತೇವೆ. ಇದರಿಂದಾಗಿ ಎಷ್ಟೋ ಜಲಚರಜೀವಿಗಳು ತೊಂದರೆ ಅನುಭವಿಸುತ್ತವೆ. ಸಾಯುವಂತಹ ಸನ್ನಿವೇಶಗಳೂ ಎದುರಾಗುತ್ತವೆ ಎಂಬುದನ್ನು ಎಲ್ಲರೂ ಚಿಂತಿಸಬೇಕು ಎಂದರು.
ಸೋಪು, ಶ್ಯಾಂಪೋ ಇತರೆ ರಾಸಾಯನಿಕಗಳನ್ನು ಕಣ್ಣು, ಬಾಯಿ, ಮೂಗಿಗೆ ಹೋದರೆ ನಾವೇ ಸುಧಾರಿಸಿಕೊಳ್ಳುವುದಕ್ಕೆ ಸ್ವಲ್ಪ ಸಮಯ ಹಿಡಿಯುತ್ತದೆ. ಇಂತಹುದರಲ್ಲಿ ನೀರಿನಲ್ಲೇ ವಾಸ ಮಾಡುವ ಮೀನುಗಳು, ಮೊಸಳೆಗಳು ಸೇರಿದಂತೆ ಎಲ್ಲ ರೀತಿಯ ಜಲಚರ ಜೀವಿಗಳು ತುಂಬಾ ತೊಂದರೆ ಅನುಭವಿಸುತ್ತವೆ ಎಂಬುದನ್ನು ಮನಗಾಣಬೇಕಿದೆ ಎಂದು ಹೇಳಿದರು.
ಪರಿಸರ ಸಂಸ್ಥೆ ಅಧ್ಯಕ್ಷ ಮಂಗಲ ಎಂ. ಯೋಗೀಶ್ ಮಾತನಾಡಿ, 20 ವರ್ಷಗಳಿಂದ ನಿರಂತರವಾಗಿ ಯುವಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಪರಿಸರ ನಡಿಗೆ ಮುಖಾಂತರ ಜೀವ ವೈವಿಧ್ಯತೆಯ ಮಹತ್ವವನ್ನು ತಿಳಿಸುತ್ತಾ ಬಂದಿದ್ದೇವೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಬನ್ನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎನ್.ಎಸ್. ಕರ್ಯಕ್ರಮಾಧಿಕಾರಿ ಡಾ. ವೈ.ಕೆ. ಭಾಗ್ಯ, ಪ್ರಾಧ್ಯಾಪಕಿ ಹೀನಾಕೌಸರ್, ಎನ್ಎಸ್ಎಸ್ನ 120ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕರ್ಯಾಗಾರದಲ್ಲಿ ಭಾಗವಹಿಸಿದ್ದರು. ಜನಪದ ಕಲಾವಿದ ಬಸವರಾಜು ಸಂತೆಕಸಲಗೆರೆ ಪರಿಸರ ಸಂರಕ್ಷಣಾ ಗೀತೆಗಳನ್ನು ಸಾಧರಪಡಿಸಿದರು. ಬಳಿಕ ಪರಿಸರ ನಡಿಗೆ ಮೂಲಕ ಜೀವವೈವಿಧ್ಯಗಳ ಪರಿಚಯ, ಪ್ಲಾಸ್ಟಿಕ್ ನಿರ್ಮೂಲನೆಗಾಗಿ ಶ್ರಮದಾನ ನಡೆಯಿತು.