ಕಕ್ಕಬ್ಬೆ ; ಕಾಡಾನೆ ದಾಳಿಯಲ್ಲಿ ಮೃತಪಟ್ಟ ರಾಜ ದೇವಯ್ಯ ಕುಟುಂಬದವರಿಗೆ ಶಾಸಕ ಎ. ಎಸ್. ಪೊನ್ನಣ್ಣ ಸಾಂತ್ವನ ಹೇಳಿದರು.
ಪಾರ್ಥಿವ ಶರೀರವನ್ನು ವೀಕ್ಷಿಸಿ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ ತಕ್ಷಣವೇ ಪರಿಹಾರ ನೀಡುವ ಭರವಸೆ ನೀಡಿದರು. ಪ್ರಾಣ ಹಾನಿಗೆ ಕಾರಣವಾದ ಆನೆಯನ್ನು ಸೆರೆ ಹಿಡಿದು ಸ್ಥಳಾಂತರ ಮಾಡುವ ಕುರಿತು ಈಗಾಗಲೇ ಅರಣ್ಯ ಸಚಿವರೊಂದಿಗೆ ದೂರವಾಣಿ ಕರೆ ಮಾಡಿ ಚರ್ಚಿಸಿದ್ದು ಆದಷ್ಟು ಬೇಗ ಆನೆ ಮತ್ತು ಮಾನವ ಸಂಘರ್ಷದ ಸಮಸ್ಯೆಯನ್ನು ಜಿಲ್ಲೆಯಲ್ಲಿ ಅಂತ್ಯಗೊಳಿಸಲು ಬದ್ದರಾಗಿದ್ದೇವೆ ಎಂದರು.
ಕೆಡಿಪಿ ಸದಸ್ಯ ಬಾಚಿಮಂಡ ಲವ ಚಿಣ್ಣಪ್ಪ, ಕಕ್ಕಬ್ಬೆ ಗ್ರಾಮ ಪಂಚಾಯಿತಿ ಸದಸ್ಯ ಕಲಿಯಂಡ ಸಂಪತ್, ರಾಜೀವ್ ಗಾಂಧಿ ಪಂಚಾಯತ್ರಾಜ್ ಸಂಘಟನೆ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ, ಡಿಸಿಸಿ ಸದಸ್ಯರಾದ ಬೊಳ್ಳಂಡ ಶರಿ, ಮಂಜು, ಅಪ್ಪಚೆಟ್ಟೋಳಂಡ ಮಿಥುನ್, ಸೋಮಯ್ಯ ಇದ್ದರು.
Leave a comment