ಹುಲ್ಲಹಳ್ಳಿ: ಸಮೀಪದ ಶಿರಮಳ್ಳಿ ಗ್ರಾಮದಲ್ಲಿರುವ ಶ್ರೀ ಮುರುಗಿ ಸ್ವಾಮಿ ಮಠದ ವತಿಯಿಂದ ಶ್ರೀ ಇಮ್ಮಡಿ ಮುರುಗೀ ಸ್ವಾಮಿಗಳು ನೂತನವಾಗಿ ನಿರ್ಮಿಸುತ್ತಿರುವ ಹಿರಿಯ ಶ್ರೀಗಳ ಗದ್ದಿಗೆ ಹಾಗೂ ಮಠದ ಆವರಣ ದ್ವಾರದ ಕಾಮಗಾರಿಯನ್ನು ಸಿದ್ದಗಂಗಾ ಮಠದ ಪೂಜ್ಯ ಸಿದ್ದಲಿಂಗ ಮಹಾ ಸ್ವಾಮಿಗಳು ವೀಕ್ಷಿಸಿದರು.
ಗೌಡಿಕೆ ರಾಜಶೇಖರ್ ಮೂರ್ತಿ ದೇಬೂರು ಅಶೋಕ್ ದುಗ್ಗಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಶಿವ ನಾಗಪ್ಪ, ತಾಲೂಕು ರೈತ ಸಂಘದ ಅಧ್ಯಕ್ಷ ಮಾದನಳ್ಳಿ ಮೂರ್ತಿ, ಬೆಳೆಲೆ ಶಿವಪಾದು ಬಿಜೆಪಿ ಮಹೇಶ್, ಕೊಂಗಳ್ಳಿ ಪಟೇಲ್, ಮಹೇಶ್, ಗುರುಸ್ವಾಮಿ, ಪ್ರಭು, ಬಸಾಪುರ ಮಹಾದೇವಸ್ವಾಮಿ, ಕಡೆಜಟ್ಟಿ ಶಿವಕುಮಾರ್, ಮಲ್ಲಿಕಾರ್ಜುನಪ್ಪ, ಶಂಕ್ರಪ್ಪ, ಮತ್ತು ಶಿರಮಳ್ಳಿ ಹುಸ್ಕೂರ್ ಬೆಳಲೆ ಗ್ರಾಮಸ್ಥರು ಹಾಜರಿದ್ದರು.