ಟ್ರಕ್ ಗಳ ಓಡಾಟದಿಂದ ಹದಗೆಡುತ್ತಿರುವ ರಸ್ತೆ
ಗುಂಡಿ ಬಿದ್ದ ಕೆರೆ ಏರಿ| ನಿತ್ಯ ದೂಳಿನ ಸಮಸ್ಯೆ
ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಚಪ್ಪರದಹಳ್ಳಿಯಿಂದ ಹುಣಸೆಕೊಪ್ಪಲು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ನಿತ್ಯ ಲಾರಿ ಹಾಗೂ ಟ್ರಕ್ ಗಳ ಓಡಾಟದಿಂದ ಹದಗೆಟ್ಟು, ಗುಂಡಿ ಬಿದ್ದಿದೆ.
ಹುಣಸೆಕೊಪ್ಪಲು ಹೊರವಲಯದಲ್ಲಿ ಎರಡು ಮೂರು ಕ್ರಷರ್ ಹಾಗೂ ಕಲ್ಲಿನ ಗಣಿಗಾಣಿಗಾರಿಕೆಗಳು ನಡೆಯುವ ಸ್ಥಳಗಳಾಗಿದ್ದು, ಈ ಕ್ರಷರ್ ಗಳಿಂದ ನಿತ್ಯ ಎಂ-ಸ್ಯಾಂಡ್, ಕಲ್ಲಿನ ಪುಡಿ ಸೇರಿದಂತೆ ಇನ್ನಿತರ ವಸ್ತುಗಳನ್ನು ತುಂಬಿಕೊಂಡು ಓಡಾಡುವ ವಾಹನಗಳು ಈ ರಸ್ತೆಯನ್ನೇ ಹೆಚ್ಚಾಗಿ ಅವಲಂಬಿಸಿದ ಪರಿಣಾಮ ರಸ್ತೆ ಬೇಗ ಹಾಳಾಗುವುದಕ್ಕೆ ದಾರಿಯಾಗಿದೆ.
ಗುಂಡಿಬಿದ್ದ ಕೆರೆ ಏರಿ,ಚಪ್ಪರದಹಳ್ಳಿ ಗ್ರಾಮದ ಮೊಗೆಕೆರೆ ಏರಿಯು ಈಗಾಗಲೇ ಬೃಹತ್ ಗುಂಡಿ ಬಿದ್ದಿದ್ದು, ಅಪಘಾತಕ್ಕೆ ಆಹ್ವಾನ ನೀಡುತ್ತಿದೆ. ಇದಲ್ಲದೆ ಕಲ್ಲಿನಪುಡಿ (ಡಸ್ಟ್) ತುಂಬಿಕೊಂಡು ಸಂಚಾರ ಮಾಡುವಂತಹ ಟ್ರಕ್ ಹಾಗೂ ಲಾರಿಗಳಿಂದ ತಿಳಿಯ ನಿವಾಸಿಗಳು ನಿತ್ಯ ಧೂಳಿನ ಸಮಸ್ಯೆ ಹೆದರಿಸುತ್ತಿದ್ದಾರೆ. ಇದರಿಂದ ಅರೋಗ್ಯ ಆರೋಗ್ಯ ಸಮಸ್ಯೆ ಕಾಡುವ ಭಯಭೀತಿ ಸ್ಥಳೀಯರಿಯಲ್ಲಿ ಆತಂಕ ಮೂಡಿಸಿದೆ. ಈ ಸಮಸ್ಯೆ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯಿತಿಯಾಗಲಿ ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಾಗಲಿ ಯಾವುದೇ ಕ್ರಮ ತೆಗೆದುಕೊಳ್ಳದೆ ಇರುವುದಕ್ಕೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೂಡಲೇ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಹಾಳಾಗುತ್ತಿರುವ ರಸ್ತೆಯನ್ನು ಸಂರಕ್ಷಿಸಬೇಕು, ಅಧಿಕ ಟ್ರಕ್ ಹಾಗೂ ಲಾರಿಗಳ ಓಡಾಟಕ್ಕೆ ಕಡಿವಾಣವಾಗಬೇಕು ಮತ್ತು ಕ್ರಷರ್ ಮಾಲೀಕರು ತಮ್ಮ ಲಾರಿಗಳು ರಸ್ತೆಯಲ್ಲಿ ಸಂಚರಿಸುವ ಮುನ್ನ ರಸ್ತೆಗೆ ನೀರನ್ನು ಹಾಕುವ ಮೂಲಕ ಧೂಳಿನ ಸಮಸ್ಯೆ ಬಾರದಂತೆ ಎಚ್ಚರವಹಿಸುವಂತೆ ಅಧಿಕಾರಿಗಳು ಸೂಚಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.