ಮೈಸೂರು: ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದ ಜಾಹೀರಾತಿನಲ್ಲಿ ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ ಭಾವಚಿತ್ರ ಕಂಡು ಬಂದಿದ್ದು, ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ನಾಳೆ ಎಚ್.ವಿ.ರಾಜೀವ್ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದು, ಈ ಬಗ್ಗೆ ಮೈಸೂರಿನ ಸ್ಥಳೀಯ ಪತ್ರಿಕೆಗಳಿಗೆ ಜಾಹೀರಾತು ನೀಡಲಾಗಿದೆ. ಜಾಹೀರಾತಿನಲ್ಲಿ ಕಾಂಗ್ರೆಸ್ ಮುಖಂಡರ ಭಾವಚಿತ್ರದ ಜೊತೆಗೆ ಎಸ್.ಟಿ. ಸೋಮಶೇಖರ್ ಭಾವಚಿತ್ರ ಕಂಡು ಕೂಡ ಹಾಕಲಾಗಿದ್ದು, ಸಾಕಷ್ಟು ಕುತೂಹಲ ಮೂಡಿದೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವೇಳೆ ಎಸ್.ಟಿ. ಸೋಮಶೇಖರ್ ಜತೆ ಹೆಚ್. ವಿ. ರಾಜೀವ್ ಆಪ್ತರಾಗಿದ್ದರು. ಹೀಗಾಗಿ ಎಲ್ಲೋ ಒಂದು ಕಡೆ ಮೈಸೂರಿನ ಅಪರೇಷನ್ ಹಸ್ತಕ್ಕೂ ಎಸ್.ಟಿ. ಸೋಮಶೇಖರ್ ಸಹಾಯ ಮಾಡಿದ್ರಾ ಎನ್ನುವ ಚರ್ಚೆಗಳು ರಾಜಕೀಯವಲಯದಲ್ಲಿ ಮೂಡಿದೆ.