ಕಲ್ಯಾಣಿಗೆ ಗರುಡ ಪ್ರದಕ್ಷಿಣೆ
1 ಮೇಲುಕೋಟೆಯಕಲ್ಯಾಣಿಯಲ್ಲಿಮಂಗಳವಾರ ನಡೆದವೈರಮುಡಿ ಬ್ರಹ್ಮೋತ್ಸವತೀರ್ಥಸ್ನಾನದ ಪ್ರಯುಕ್ತ ಸೇರಿದ್ದ ಅಪಾರಭಕ್ತರು
2 ವೈರಮುಡಿತೀರ್ಥಸ್ನಾನದಂದುರಾಜಮುಡಿ ಕಿರೀಟ ಧರಿಸಿ ಚಿನ್ನದ ಪ್ರಭಾವಳಿಯೊಂದಿಗೆ ಅಲಂಕೃತನಾದ ಚೆಲುವನಾರಾಯಣಸ್ವಾಮಿ
————————————————
ಮೇಲುಕೋಟೆ :ಶ್ರೀನಾರಾಯಣಸ್ವಾಮಿ ಭೂಲೋಕಕ್ಕೆ ಅವಿರ್ಭವಿಸಿದ ಜಯಂತ್ಯುತ್ಸವ ಪವಿತ್ರ ದಿನವಾದ ಮೀನಮಾಸದ ಹಸ್ತನಕ್ಷತ್ರದ ಮಂಗಳವಾರ ಚೆಲುವನಾರಾಯಣಸ್ವಾಮಿಗೆ ವೈರಮುಡಿ ಬ್ರಹ್ಮೋತ್ಸವದ ತೀರ್ಥಸ್ನಾನ ಮಹೋತ್ಸವ ಶ್ರದ್ಧಾಭಕ್ತಿಂದ ನೆರವೇರಿತು.
ಸ್ನಪನ ಶೆಲ್ವರಿಗೆ ನಾಡಿನ ಸುಭೀಕ್ಷತೆಗಾಗಿ ಮಂಗಳವಾದ್ಯ ಮತ್ತು ವೇದಮಂತ್ರದೊಂದಿಗೆ ಅಭಿಷೇಕ ನೆರವೇರಿಸಲಾಯಿತು. ಇದೇ ವೇಳೆ ಕಲ್ಯಾಣಿ ತಾಯಿಗೆ ಪೂಜೆ ನೆರವೇರಿಸಿ ಸ್ನಪರಶೆಲ್ವರನ್ನು ಕಲ್ಯಾಣಿಗೆಕೊಂಡೊಯ್ದು ತೀರ್ಥಸ್ನಾನ ನೆರವೇರಿಸಲಾಯಿತು. ಕಲ್ಯಾಣಿಯ ನಾಲ್ಕೂಕಡೆ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಸಾವಿರಾರು ಭಕ್ತರು ಕಲ್ಯಾಣಿಯಲ್ಲಿ ಪವಿತ್ರಸ್ನಾನ ಮಾಡಿದರು. ಬೆಳಿಗ್ಗೆ ತಂಗಳನ್ನದ ಮಂಟಪಕ್ಕೆಚೆಲುವನಾರಾಯಣಸ್ವಾಮಿಯ ಉತ್ಸವ ನಡೆದ ನಂತರದೇವಾಲಯದಅಮ್ಮನವರ ಸನ್ನಿಧಿಯಲ್ಲಿ ಸಂಧಾನಸೇವೆ ನೆರವೇರಿತು. ಮದ್ಯಾಹ್ನ 1 ಗಂಟೆಯ ವೇಳೆಗೆ ಸ್ವಾಮಿಯ ಉತ್ಸವ ಕಲ್ಯಾಣಿಗೆ ಸಾಗಿದ ನಂತರ ಅಲ್ಲಿ ತೀರ್ಥಸ್ನಾನದ ಪ್ರಕ್ರಿಯೆಗಳು ಆರಂಭವಾಗಿ 2-45ರವೇಳೆಗೆ ಮುಕ್ತಾಯವಾದವು
ಬೆಳಿಗ್ಗೆ ಐದುಗಂಟೆಯಿಂದಲೇಕಾರ್ಯಪ್ರವೃತ್ತರಾಗಿದ್ದಇನ್ಸ್ಪೆಕ್ಟರ್ ಸಿದ್ಧಪ್ಪ ಮತ್ತು ಸುಮಾರಾಣಿ ನೇತೃತ್ವದ ಮೇಲುಕೋಟೆ ಪೊಲೀಸರತಂಡತೀರ್ಥಸ್ನಾನವಾಗುವವರೆಗೆ ಕಟ್ಟೆಚ್ಚರವಹಿಸಿ ಬಂದೋಬಸ್ತ್ ಮಾಡಿದ್ದರು.
ರಾಜಮುಡಿಕಿರೀಟಧಾರಣೆ ಮುಕ್ತಾಯ : ಸಂಜೆ ಪರಕಾಲಮಠದಲ್ಲಿ ಪಟ್ಟಾಭಿಷೇಕ ಮಹೋತ್ಸವದ ಕೈಂಕರ್ಯಗಳು ನೆರವೇರಿದವು. ಮಾ.21ರ ವೈರಮುಡಿಉತ್ಸವದರಾತ್ರಿಯಿಂದಚೆಲುವನಾರಾಯಣಸ್ವಾಮಿಯನ್ನು ಅಲಂಕರಿಸಿದ್ದ ಬ್ರಹ್ಮೋತ್ಸವದಕೊನೆಯ ಉತ್ಸವವಾದ ಪಟ್ಟಾಭಿಷೇಕ ಉತ್ಸವದಲ್ಲಿ ಕೊನೆಯಭಾರಿ ಅಲಂಕರಿಸಿತ್ತು. ರಾಜಮುಡಿ ಮುಡಿ ಅಲಂಕಾರ ಮುಕ್ತಾಯವಾಗುತ್ತಿದ್ದಂತೆ ಸ್ವಾಮಿಗೆ ಸಮರಭೂಪಾಲವಾಹನೋತ್ಸವ ವೈಭವದಿಂದ ನೆರವೇರಿತು.
ಮಾಲೆ ಮಾರ್ಯದೆ
——————
ವೈರಮುಡಿ ಬ್ರಹ್ಮೋತ್ಸವದ ಯಶಸ್ಸಿಗೆ ಶ್ರಮಿಸಿದ ನಾಲ್ಕೂಮಂದಿ ಸ್ಥಾನೀಕರಿಗೆ ರಾಮಾನುಜಾಚಾರ್ಯರ ಕಾಲದಿಂದಲೂ ನಡೆದು ಬಂದ ಪರಂಪರೆಯಂತೆ ಪಟ್ಟಾಭಿಷೇಕ-ಸಮರಭೂಪಾಲ ವಾಹನ ನಂತರದೇವಾಲಯದ ಚಿನ್ನದ ಧ್ವಜಸ್ತಂಬದ ಮುಂಭಾಗ ಚೆಲುವನಾರಾಯಣಸ್ವಾಮಿಯ ಸಾನ್ನಿಧ್ಯದಲ್ಲಿ ಮಾಲೆ ಮಾರ್ಯದೆ ಮಾಡಿಗೌರವಿಸಲಾಯಿತು. ನಾಲ್ಕನೇ ಸ್ಥಾನೀಕರಾದ ಶ್ರೀನಿವಾಸನರಸಿಂಹನ್ ಗುರೂಜಿ, ಪ್ರಥಮ ಸ್ಥಾನೀಕ ಕರಗಂರಾಮಪ್ರಿಯ ಮೂರನೇ ಸ್ಥಾನೀಕ ಕೋವಿಲ್ ನಂಬಿ ಮುಕುಂದನ್ ಸ್ವಾಮಿಯ ಮಾಲೆ ಮಾರ್ಯದೆ ಸ್ವೀಕರಿಸಿದರು.
ಕಲ್ಯಾಣಿಗೆಗರುಡ ಪ್ರದಕ್ಷಿಣೆ (ಬಾಕ್ಸ್ )
———————
ಕಲ್ಯಾಣಿಯಲ್ಲಿತೀರ್ಥಸ್ನಾನ ನಡೆಯುತ್ತಿದ್ದ ವೇಳೆ ದಿಡೀರ್ ಕಾಣಿಸಿಕೊಂಡ ಗರುಡ ಸ್ನಪನ ಶೆಲ್ವರಿಗೆ ತೀರ್ಥಸ್ನಾನವಾಗುತ್ತಿದ್ದವೇಳೆ ಕಲ್ಯಾಣಿಯಲ್ಲಿ ಪ್ರದಕ್ಷಿಣೆ ಹಾಕಿದ ವೇಳೆ ಭಕ್ತರಜಯಘೋಷ ಮುಗಿಲುಮುಟ್ಟಿತ್ತು.ಬೆಳಿಗ್ಗೆಯಿಂದಲೂ ಕಲ್ಯಾಣಿಯತ್ತ ಸುಳಿಯದ ಗರುಡತೀರ್ಥಸ್ನಾನದ ವೇಳೆ ಆಗಮಿಸಿ ಭಕ್ತರ ಹಷೋದ್ಗಾರಕ್ಕೆ ಕಾರಣವಾಯಿತು.