ಪ್ರತಿನಿಧಿ ವರದಿ ಸರಗೂರು
ತಾಲೂಕಿನ ಹುಸ್ಕೂರ್ ಹಾಡಿ ಗ್ರಾಮದಲ್ಲಿ ನೂರಾಳೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಕೊಂಡೋತ್ಸವ ಗುರುವಾರ ವಿಜೃಂಭಣೆಯಿಂದ ನೆರವೇರಿತು.
ಜಾತ್ರಾ ಮಹೋತ್ಸವದ ಅಂಗವಾಗಿ ದೇವಾಲಯವನ್ನು ತಳಿರು ತೋರಣಗಳಿಂದ, ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಯಿತ್ತು . ಬಳಿಕ ನುಗು ಜಲಾಶಯಕ್ಕೆ ದೇವರ ಉತ್ಸವ ಮೂರ್ತಿಯನ್ನು ಕರೆದೊಯ್ದ ಅಭಿಷೇಕ ನೆರವೇರಿಸಿ, ಬಾಯಿ ಬೀಗ ಸೇವೆ, ಸತ್ತಿಗೆ , ಸೂರಪಾನಿ, ವಾದ್ಯ ಘೋಷ್ಠಿಗಳೊಂದಿಗೆ ಮೆರವಣಿಗೆಯಲ್ಲಿ ದೇವಾಲಯಕ್ಕೆ ಬರಮಾಡಿಕೊಳ್ಳಲಾಯಿತು,
ಮಹಿಳೆಯರು ಮಕ್ಕಳು ಬಾಯಿ ಬೀಗ ಸೇವೆ ಮಾಡಿ ಹರಕೆ ತೀರಿಸಿದರು. ದಾರಿ ಉದ್ದಕ್ಕೂ ಭಕ್ತರು ದೇವರಿಗೆ ನಮಿಸಿ ಕತ್ತಿ ಹಿಡಿದು ಭಕ್ತಿ ಭಾವ ಮೆರೆದರು. ದೇವಸ್ಥಾನದ ಮುಂಭಾಗದಲ್ಲಿ ಹಾಕಲಾಗಿದ್ದ ಕೊಂಡೋತ್ಸವಕ್ಕೆ ವಿಶೇಷ ಪೂಜೆ ಸಲ್ಲಿಸಿ. ಭಕ್ತರು ಕಣ್ತುಂಬಿಸಿಕೊಂಡು ದೇವರ ಕೃಪೆಗೆ ಪಾತ್ರರಾದರು.
ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಹುಸ್ಕೂರ್ ಹಾಡಿ, ದಡದಲ್ಲಿ, ಹಳೆಯೂರು, ಹೊಸಹೆಗ್ಗಡಿಲು, ಹಲಸೂರು ,ಹೊಸ ಬೀರ್ವಾಳ್, ಸೇರಿದಂತೆ ಅಕ್ಕಪಕ್ಕದ ಗ್ರಾಮಸ್ಥರು ದೇವರ ದರ್ಶನ ಪಡೆದರು.
ಇನ್ಸ್ ಪೆಕ್ಟರ್ ಲಕ್ಷ್ಮಿಕಾಂತ್, ಎಸ್ಐ .ಎಂ.ಸಿ ಮಧು, ಎಸ್ಐ ರಂಗನಾಥಯ್ಯ. ನಾರಾಯಣ ಸಿಬ್ಬಂದಿ ನಾಗರಾಜು ,ಕೃಷ್ಣಯ್ಯ, ಇಮ್ರಾನ್ ಅಹಮದ್, ಜಗದೀಶ್, ಸೋಮನಾಯಕ , ಮಂಜು ಸೇರಿದಂತೆ ಇನ್ನಿತರರಿಂದ ಸೂಕ್ತ ಬಂದೋಬಸ್ತ್ ಮಾಡಲಾಯಿತು.