ದೇವನಹಳ್ಳಿ:ತಾಲೂಕಿನಲ್ಲಿರುವ ಸಾರ್ವಜನಿಕ ಸಂಪರ್ಕ ಕೇಂದ್ರದಲ್ಲಿ ಸಂಸ್ಥಾಪಕರಾದ ಟಿ.ಎಂ.ಸಹದೇಶ್ ಅಧ್ಯಕ್ಷತೆಯಲ್ಲಿ ಉದ್ಯೋಗ ಜಾಗೃತಿ ಸಭೆ ನಡೆಯಿತು.
ನಂತರ ಮಾತನಾಡಿ ದೇವನಹಳ್ಳಿ ತಾಲೂಕಿನ ಸುತ್ತಮುತ್ತಲಿನ ಕಂಪನಿಗಳಲ್ಲಿ ಸಾವಿರಾರು ಉದ್ಯೋಗಗಳು ಖಾಲಿ ಇದ್ದು ವಿದ್ಯಾವಂತ ಯುವಕರು ಅನುಕೂಲ ಪಡೆಯಬೇಕು ಎಂದು ಸಭೆ ಮಾಡಲಾಗಿದ್ದು, ಇಲ್ಲಿ ಹೆಸರಾಂತ ಕಂಪನಿಗಳ ಎಚ್ಆರ್ ಗಳು ಬಂದಿದ್ದು ನೇರ ಸಂದರ್ಶನದ ಮೂಲಕ ಕೆಲಸಕ್ಕೆ ತೆಗೆದುಕೊಳ್ಳಲಾಗುವುದು ಬಹುಮುಖ್ಯವಾಗಿ ದೇವನಹಳ್ಳಿಯ ಪ್ರತಿಯೊಬ್ಬ ವಿದ್ಯಾವಂತರಿಗೂ ಉದ್ಯೋಗ ಸಿಗಬೇಕು ಎಂದು ತಿಳಿಸಿದರು.
ಉದ್ಯೋಗಾವಕಾಶ ಕಲ್ಪಿಸುವುದರ ಮೂಲಕ ಇಂದಿನ ಯುವ ಜನಾಂಗದವರನ್ನು ಆರ್ಥಿಕವಾಗಿ- ಸಾಮಾಜಿಕವಾಗಿ ಭದ್ರತೆಯನ್ನು ಕಲ್ಪಿಸುವ ಆಶಯದೊಂದಿಗೆ ನಮ್ಮ ಸಂಸ್ಥೆಯು ಹಲವಾರು ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದು ಅದರ ಸದುಪಯೋಗವನ್ನು ಪ್ರತಿಯೊಬ್ಬ ಯುವಕನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ದೇವನಹಳ್ಳಿ ಏರ್ಪೋರ್ಟ್ ನ ವಿಭಾಗದ ಎಚ್ .ಆರ್ ಲಕ್ಷ್ಮಿ ನಾರಾಯಣ, ಸಂತೋಷ್ , ನಾರಾಯಣಸ್ವಾಮಿ , ಚನ್ನರಾಯಪಟ್ಟಣ ರೈತರ ಮುಖಂಡರಾದ ವೆಂಕಟರಮಣಪ್ಪ , ದೇವನಹಳ್ಳಿ ತಾಲೂಕಿನ ಸುತ್ತಮುತ್ತಲಿನ ಪ್ರತಿಭಾವಂತ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
31ಡಿಎಚ್ಎಲ್ ಪಿ -೫
ದೇವನಹಳ್ಳಿ ತಾಲೂಕಿನಲ್ಲಿರುವ ಸಾರ್ವಜನಿಕ ಸಂಪರ್ಕ ಕೇಂದ್ರದಲ್ಲಿ ಸಂಸ್ಥಾಪಕರಾದ ಟಿ.ಎಂ.ಸಹದೇಶ್ ಅಧ್ಯಕ್ಷತೆಯಲ್ಲಿ ಉದ್ಯೋಗ ಜಾಗೃತಿ ಸಭೆ ನಡೆಯಿತು.