ಮೈಸೂರು: ಈ ಬಾರಿ ಚಾಮರಾಜನಗರ ಮೀಸಲು ಕ್ಷೇತ್ರದಿಂದ ವರಿಷ್ಠರು, ಸಿಎಂ ಸಿದ್ದರಾಮಯ್ಯ ಅವರು ನನಗೆ ಸ್ಪರ್ಧೆ ಮಾಡಲಿಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಚಾಮರಾಜನಗರ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ ಹೇಳಿದ್ದಾರೆ. ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ತಿ.ನರಸೀಪುರ ಕ್ಷೇತ್ರ ಇದ್ದಾಗ ಈ ಭಾಗವು ನರಸೀಪುರಕ್ಕೆ ಸೇರಿತ್ತು. ನಮ್ಮ ತಂದೆಯವರಿಗೂ ಸಾಕಷ್ಟು ಪ್ರೀತಿ ತೋರಿದ್ದೀರಾ. ಸಿದ್ದರಾಮಯ್ಯನವರು ಎರಡನೇ ಬಾರಿಗೆ ಸಿಎಂ ಆಗಿರೋದು ನಮಗೆ ಖುಷಿಯ ವಿಷಯ. 26ರಂದು ನನಗೆ ಮತ ನೀಡುವ ಮೂಲಕ ನನಗೊಂದು ಅವಕಾಶ ಕೊಡಬೇಕು ಎಂದು ಜನರಲ್ಲಿ ಸುನಿಲ್ ಬೋಸ್ ಮನವಿ ಮಾಡಿದರು.