ಪ್ರತಿನಿಧಿ ವರದಿ ಬೆಟ್ಟದಪುರ
ಚಪ್ಪರದಹಳ್ಳಿ ಗ್ರಾಮದ ಪ್ರಾಥಮಿಕ ಪಶು ಆರೋಗ್ಯ ಕೇಂದ್ರದಲ್ಲಿ ಪಶು ವೈದ್ಯಕೀಯ ಮತ್ತು ಪಶುಪಾಲನಾ ಸೇವಾ ಇಲಾಖೆಯಿಂದ 5ನೇ ಸುತ್ತಿನ ಕಾಲುಬಾಯಿ ಜ್ವರ ತಡೆಗಟ್ಟುವ ಲಸಿಕಾ ಕಾರ್ಯಕ್ಕೆ ಸೋಮವಾರ ಚಾಲನೆ ನೀಡಲಾಯಿತು.
ಹಿರಿಯ ಪಶುವೈದ್ಯ ಪರೀಕ್ಷಕ ಗೋಪಾಲಕೃಷ್ಣ ಮಾತನಾಡಿ, ಜಾನುವಾರುಗಳಲ್ಲಿ ಕಂಡುಬರುವ ಕಾಲುಬಾಯಿ ಜ್ವರವನ್ನು ತಡೆಗಟ್ಟುವ ನಿಟ್ಟಿನಲ್ಲಿ ಲಸಿಕೆ ನೀಡಲಾಗುತ್ತಿದೆ. ಹೈನುಗಾರರು ಹಾಗೂ ರೈತರು ತಮ್ಮ ಜಾನುವಾರುಗಳಿಗೆ ಈ ಲಸಿಕೆಯನ್ನು ಹಾಕಿಸುವ ಮೂಲಕ ಜ್ವರ ಬಾರದಂತೆ ಮುನ್ನೆಚರಿಕೆ ಕ್ರಮವಹಿಸಬಹುದು. ಅಲ್ಲದೆ ಇನ್ಯಾವುದೇ ಸಮಸ್ಯೆ ಇದ್ದಲ್ಲಿ ಸಮೀಪದ ಪಶು ಆಸ್ಪತ್ರೆಯನ್ನು ಸಂಪರ್ಕಿಸಿ ಎಂದು ಹೇಳಿದರು.
ಕಿರಿಯ ಪಶು ವೈದ್ಯ ಪರೀಕ್ಷಕ ಮಹಮ್ಮದ್ ಸಮೀವುಲ್ಲಾ, ಚೇತನ್, ಪಶುಸಖಿ ಮೀನಾಕ್ಷಿ, ಇಲಾಖೆ ನೌಕರರಾದ ಶಿವರಾಜ್, ಗೌರಮ್ಮ, ಜಗದೀಶ್ ಸೇರಿದಂತೆ ರೈತರು ಇದ್ದರು.
01ಬಿಟಿಪಿ01:ಚಪ್ಪರದಹಳ್ಳಿ ಗ್ರಾಮದಲ್ಲಿ ಪಶು ವೈದ್ಯಕೀಯ ಮತ್ತು ಪಶುಪಾಲನಾ ಸೇವಾ ಇಲಾಖೆಯಿಂದ 5ನೇ ಸುತ್ತಿನ ಕಾಲುಬಾಯಿ ಜ್ವರ ತಡೆಗಟ್ಟುವ ಲಸಿಕಾ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಗೋಪಾಲಕೃಷ್ಣ, ಮಹಮ್ಮದ್ ಸಮೀವುಲ್ಲಾ, ಚೇತನ್, ಮೀನಾಕ್ಷಿ, ಶಿವರಾಜ್ ಇದ್ದರು