ಪ್ರತಿನಿಧಿ ವರದಿ ಹುಣಸೂರು
ಹುಣಸೂರು ರೋಟರಿ ಕ್ಲಬ್, ನಗರಸಭೆ ಮತ್ತು ಪುತ್ತೂರು ರೋಟರಿ ಕ್ಲಬ್ ಸಹಯೋಗದಲ್ಲಿ ಲೋಕಸಭೆ ಚುನಾವಣೆ ಹಿನ್ನಲೆ ಮತದಾನದ ಅಗತ್ಯತೆ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬೀದಿನಾಟಕ ಪ್ರದರ್ಶಿಸುವ ಮೂಲಕ ಮತದಾರರ ಗಮನ ಸೆಳೆಯಲಾಯಿತು.
ಸೋಮವಾರ ನಗರದ ವಿವಿಧ ಪ್ರಮುಖ ವೃತ್ತಗಳಲ್ಲಿ ಪುತ್ತೂರು ರೋಟರಿ ಕ್ಲಬ್ ತಂಡದ ಸದಸ್ಯರು ಮತದಾನವೆಂಬ ಪವಿತ್ರಕಾರ್ಯ ಎನ್ನುವ ಶೀರ್ಷಿಕೆಯೊಂದಿಗೆ ಬೀದಿ ನಾಟಕ ಪ್ರದರ್ಶಿಸಿದರು. ಒಂದೊಂದು ಮತದ ಪ್ರಾಮುಖ್ಯತೆಯನ್ನು ಸರಳವಾಗಿ ನಾಟಕದ ಮೂಲಕ ವಿವರಿಸಿದರು.
ಈ ವೇಳೆ ಮಾತನಾಡಿದ ಹುಣಸೂರು ರೋಟರಿ ಕ್ಲಬ್ ಅಧ್ಯಕ್ಷ ರೊ.ಚನ್ನಕೇಶವ, ನಗರ ಪ್ರದೇಶಗಳಲ್ಲಿ ಸಾಕ್ಷರ ಮತದಾರರು ಮತದಾನದ ದಿನ ಮತಗಟ್ಟೆಗೆ ಹೋಗಲು ಬೇಜವಾಬ್ದಾರಿ ಪ್ರದರ್ಶಿಸುವ ನಡೆಯನ್ನು ತ್ಯಜಿಸಬೇಕಿದೆ. ಗ್ರಾಮೀಣ ಮತದಾರರಲ್ಲಿ ಇರುವ ಆಸಕ್ತಿ ನಗರದ ಕಲಿತ ಮತದಾರರಲ್ಲಿ ಏಕಿಲ್ಲ ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಮಹಾ ನಗರಪಾಲಿಕೆಗಳಲಿ ಶೇ.೫೦ ಮತದಾನವಾದರೆ ಅದೇ ಹೆಚ್ಚು ಎಂದ ಸಮಾಧಾನಿಸುವ ಪರಿಸ್ಥಿತಿ ತಲುಪಿದ್ದೇವೆ. ಹಾಗಾಗಿ ಮತದಾನದ ಮಹತ್ವವನ್ನು ನಾವೆಲ್ಲರೂ ಅರಿತು ಸದೃಢ ಬಾರತ ಕಟ್ಟುವತ್ತ ನಮ್ಮ ಕೊಡುಗೆಯನ್ನು ನೀಡೋಣವೆಂದರು.
ಪುತ್ತೂರು ರೋಟರಿ ಕ್ಲಬ್ನ ವಿಶ್ವಾಸ್ ಶೆಣೈ, ಆಸ್ಕರ್ ಫರ್ನಾಂಡೀಸ್, ಸುಭಾಷ್, ಹುಣಸೂರು ರೋಟರಿ ಸಂಸ್ಥೆ ಸದಸ್ಯರಾದ ಆನಂದ್, ರವೀಶ್ ಹಾಗೂ ನಗರಸಭೆ ಸಿಬ್ಬಂದಿ ಹಾಜರಿದ್ದರು.
೧ಊUಓ೩: ಹುಣಸೂರು ನಗರದ ಬಜಾರ್ ರಸ್ತೆ ವೃತ್ತದಲ್ಲಿ ರೋಟರಿ ಸಂಸ್ಥೆ ಮತ್ತು ನಗರಸಭೆ ವತಿಯಿಂದ ಮತದಾನದ ಜಾಗೃತಿ ಕಾರ್ಯಕ್ರಮದಡಿ ಬೀದಿ ನಾಟಕ ಪ್ರದರ್ಶಿಸಿ ಅರಿವು ಮೂಡಿಸಲಾಯಿತು. ರೊ.ಚನ್ನಕೇಶವ, ವಿಶ್ವಾಸ್ ಶೆಣೈ, ರವೀಶ್ ಇತರರಿದ್ದಾರೆ.