ಮಂಡ್ಯ : ಮಂಡ್ಯ ಲೋಕಸಭಾ ಅಖಾಡ ರಂಗೇರಿದ್ದು, ಮಂಡ್ಯ ಮೈತ್ರಿ ಅಭ್ಯರ್ಥಿ ಹೆಚ್ ಡಿ ಕುಮಾರಸ್ವಾಮಿ ಅವರು ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ. ಈ ವೇಳೆ ಹೆಚ್ಡಿಕೆ ಅಭಿಮಾನಿ ಹಾಗೂ ಜೆಡಿಎಸ್ ಕಾರ್ಯಕರ್ತನೊಬ್ಬ ಚುನಾವಣಾ ಖರ್ಚಿಗೆ 500 ರೂ ಕೊಟ್ಟು ಕೇಂದ್ರ ಸಚಿವರಾಗುವಂತೆ ಆಶೀರ್ವದಿಸಿದ್ದಾರೆ. ಹನಕೆರೆ ಗ್ರಾಮದ ಜೋಗಪ್ಪ ಎಂಬಾತ ಹಣಕೊಟ್ಟ ಅಭಿಮಾನಿಯಾಗಿದ್ದಾನೆ. ಮಂಡ್ಯದ ಖಾಸಗಿ ಹೋಟೆಲ್ಗೆ ಆಗಮಿಸಿದ್ದ ವೇಳೆ ಹೆಚ್.ಡಿ.ಕೆ ಕಾಲಿಗೆ ಬಿದ್ದು, ಜೋಗಪ್ಪ ಹಣ ನೀಡಿ, ಆಶೀರ್ವದಿಸಿದ್ದಾರೆ.