ಮೈಸೂರು : ಮೈಸೂರಿನ ಶಂಕರಮಠಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿದ್ದು, ಸಿದ್ದರಾಮಯ್ಯಗೆ ಮಠದ ವತಿಯಿಂದ ಪೂರ್ಣಕುಂಭ ಸ್ವಾಗತ ಕೋರಲಾಯಿತು. ಬಳಿಕ ಶಂಕರಮಠದ ಆವರಣದಲ್ಲಿರುವ ಶ್ರೀ ಶಾರದಾಂಬೆ ಮಾತೆಯ ದೇಗುಲದಲ್ಲಿ ವಿಶೇಷ ಪೂಜೆಯನ್ನು ಸಿಎಂ ಸಲ್ಲಿಸಿದರು. ಇನ್ನು ಸಿದ್ದರಾಮಯ್ಯಗೆ ಸಚಿವ ಕೆ ವೆಂಕಟೇಶ್, ಶಾಸಕರಾದ ಹರೀಶ್ ಗೌಡ, ಡಿ ರವಿಶಂಕರ್, ಮಾಜಿ ಶಾಸಕ ಡಾ ಯತೀಂದ್ರ ಸೇರಿದಂತೆ ಮತ್ತಿತರ ಪ್ರಮುಖರು ಸಾಥ್ ನೀಡಿದರು.