ಸಹಾಯಕ ಚುನಾವಣಾ ಅಧಿಕಾರಿ ಕುಮಾರಸ್ವಾಮಿ ಹೇಳಿಕೆ
ಮಾಲೂರು : ಮತದಾನದಂದು ಕಾರ್ಯನಿರ್ವಹಿಸುವ ಅಧಿಕಾರಿಗಳು ಯಾವುದೇ ಗೊಂದಲಗಳು ಇದ್ದರೂ ಸರಿಪಡಿಸಿಕೊಂಡು ಚುನಾವಣಾ ಕಾರ್ಯವನ್ನು ಯಶಸ್ವಿಯಾಗಿ ನಡೆಸುವಂತೆ ಸಹಾಯಕ ಚುನಾವಣಾ ಅಧಿಕಾರಿ ಕುಮಾರಸ್ವಾಮಿ ಹೇಳಿದರು
ಪಟ್ಟಣದ ಹೊರವಲಯದ ಮಾಲೂರು ಕೋಲಾರ ರಸ್ತೆಯ ಎಸ್ಎಫ್ಎಸ್ ಶಾಲೆಯ ಪಿಎಸ್ಐ ಸೇವಾ ಭವನದ ಲ್ಲೀ ಸಹಾಯಕ ಚುನಾವಣೆ ಅಧಿಕಾರಿಗಳ ಕಾರ್ಯಾಲಯ ತಾಲೂಕು ಕಚೇರಿ ಲೋಕಸಭಾ ಸಾರ್ವತ್ರಿಕ ಚುನಾವಣೆ 2024ರ ಪ್ರಯುಕ್ತ ಮತಗಟ್ಟೆಗಳಿಗೆ ನಿಯೋಜನೆಗೊಂಡಿರುವ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಲೋಕಸಭಾ ಚುನಾವಣೆಯಲ್ಲಿ ಮತಗಟ್ಟೆ ಅಧಿಕಾರಿಗಳು ಮತಗಟ್ಟೆಗಳಲ್ಲಿ ಯಾವುದೇ ಲೋಪ ದೋಷಗಳು ಗೊಂದಲಗಳನ್ನು ಮಾಡಿಕೊಳ್ಳದೆ ಮತದಾನ ಯಶಸ್ವಿಯಾಗಿ ಮಾಡಿದ್ದಾರೆ. ಅದೇ ರೀತಿ ಏಪ್ರಿಲ್ 26ರಂದು ನಡೆಯಲಿರುವ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಮತದಾನದ ದಿನದಂದು ಮತಗಟ್ಟೆ ಅಧಿಕಾರಿಗಳು ಉತ್ತಮ ರೀತಿಯಲ್ಲಿ ಚುನಾವಣಾ ಕಾರ್ಯ ನಿರ್ವಹಿಸಬೇಕು. ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳು ನೀಡುವ ಮಾಹಿತಿ ಪಡೆದು ಅನುಮಾನಗಳಿದ್ದಲ್ಲಿ ಬಗೆಹರಿಸಿಕೊಂಡು ಚುನಾವಣಾ ಕಾರ್ಯಯಶಸ್ವಿಗೊಳಿಸಬೇಕು ಮಹಿಳಾ ಅಧಿಕಾರಿಗಳು ಇದೇ ವಿಧಾನಸಭಾ ಚುನಾವಣೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಪುರುಷ ಅಧಿಕಾರಿಗಳು ಜಿಲ್ಲೆಯ ಬೇರೆ ತಾಲೂಕುಗಳ ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ಕಾರ್ಯಕ್ಕೆ ತೆರಳುವರು ಎಂದರು.
ತಹಸೀಲ್ದಾರ್ ರಮೇಶ್ ಮಾತನಾಡಿ, ಅಧಿಕಾರಿಗಳು ಯಾವುದೇ ರೀತಿಯ ನೆಪ ಹೇಳದೆ ಚುನಾವಣಾ ಕಾರ್ಯದಲ್ಲಿ ಭಾಗವಹಿಸಬೇಕು. ಮತಗಟ್ಟೆಗಳಲ್ಲಿ ಯಾವುದೇ ರಾಜಕೀಯ ಪಕ್ಷಗಳಿಗೆ ಸಹಾಯ ಮಾಡಲು ಮುಂದಾಗಬಾರದು ಮತದಾನವನ್ನು ಗಂಭೀರವಾಗಿ ಪರಿಗಣಿಸಿ ಮಾತು ಕಡಿಮೆ ಮಾಡಿ ಕೆಲಸ ಮಾಡಿದರೆ ಚುನಾವಣಾ ಕಾರ್ಯ ಯಶಸ್ವಿಯಾಗುತ್ತದೆ ಮಸ್ಟ್ರಿಂಗ್ ಪಡೆಯುವ ಮೊದಲು ನಿಮಗೆ ನೀಡಿರುವ ಎಲ್ಲ ಸಲಕರಣೆಗಳು ಪರೀಕ್ಷಿಸಿಕೊಳ್ಳಿ ನಿಮ್ಮ ತಂಡ ಪರಿಚಯಿಸಿಕೊಂಡು ಮತಗಟ್ಟೆಗಳಲ್ಲಿ ಯಾವುದೇ ಗೊಂದಲ ಘರ್ಷಣೆಗಳಿಗೆ ಅವಕಾಶ ಮಾಡಿಕೊಡಬೇಡಿ ಎಂದರು.
ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಹಾಗೂ ತಾಪಂ ಇಒ ವೀಣಾ ಮಾತನಾಡಿ, ಚುನಾವಣಾ ಒಂದು ದಿನದ ತರಬೇತಿ ಕಾರ್ಯದಲ್ಲಿ ಭಾಗವಹಿಸಿರುವ ಸಂಪನ್ಮೂಲ ವ್ಯಕ್ತಿಗಳು ನೀಡುವ ಮಾಹಿತಿಯನ್ನು ಪಡೆದು ನಿರ್ಭಯ ನಿರ್ಭೀತಿ ಪಕ್ಷಾತೀತವಾಗಿ ಮತಗಟ್ಟೆಗಳಲ್ಲಿ ಮಾತು ಕಡಿಮೆ ಮಾಡಿ ತಂಡದೊಂದಿಗೆ ಚರ್ಚಿಸಿ ಸಂಶಯಗಳಿದ್ದಲ್ಲಿ ಬಗೆಹರಿಸಿಕೊಂಡು ಶೇ.100 ರಷ್ಟು ಮತದಾನಕ್ಕೆ ಕಾರ್ಯನಿರ್ವಹಿಸುವಂತೆ ಹೇಳಿದರು
ಸಂಪನ್ಮೂಲ ವ್ಯಕ್ತಿಗಳಾದ ರಾಮಣ್ಣ, ವೆಂಕಟೇಶ್ ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಕಲಾ ಸಮನ್ವಯ ಅಧಿಕಾರಿ ನಂಜುಂಡೆಗೌಡ, ಗ್ರೇಡ್ ಟು ತಹಸಿಲ್ದಾರ್ ಹರಿಪ್ರಸಾದ್ ಚುನಾವಣೆ ಶಾಖೆಯ ಶಿರಸ್ತೇದಾರ್ ಸಂಪತ್ ಕುಮಾರ್ ಸಿಬ್ಬಂದಿ ಬಾಲಕೃಷ್ಣ ಹಾಜರಿದ್ದರು.