ನಿವೃತ್ತ ಪಿಐ ತಿಮ್ಮರಾಜು ಸಲಹೆ
ಪ್ರತಿನಿಧಿ ವರದಿ ಚಾಮರಾಜನಗರ
ನಗರದ ಪೊಲೀಸ್ ಕವಾಯಿತು ಮೈದಾನದಲ್ಲಿ ಚಾಮರಾಜನಗರ ಜಿಲ್ಲಾ ಪೊ ಲೀಸ್ ವತಿಯಿಂದ ಪೊಲೀಸ್ ಧ್ವಜ ದಿನಾಚರಣೆ ನಡೆಯಿತು.
ಮುಖ್ಯ ಅತಿಥಿಯಾದ ನಿವೃತ್ತ ಇನ್ಸ್ಪೆಕ್ಟರ್ ತಿಮ್ಮರಾಜು ಅವರು ಮಾತನಾಡಿ, ಮನುಷ್ಯ ಯಾವಾಗಲೂ ಏನಾದರೂ ಸಾಧನೆ ಮಾಡಬೇಕು. ನಾವು ಸರ್ಕಾರದಿಂದ ಸಂಬಳ ತೆಗೆದುಕೊಂಡು ಏನು ಕೆಲಸ ಮಾಡಿಲಿಲ್ಲ ಎಂದರೆ ಅದಕ್ಕೆ ಏನು ಅರ್ಥವಿರುವುದಿಲ್ಲ. ಹೀಗಾಗಿ ಪ್ರತಿಯೊಬ್ಬರು ಏನಾದರು ಒಂದು ಸಾಧನೆಯನ್ನು ಮಾಡಬೇಕು ಎಂದು ಸಲಹೆ ನೀಡಿದರು.
ನಾವು ಮಾಡುವ ಕರ್ತವ್ಯವನ್ನು ನಮ್ಮ ಮೇಲಾಧಿಕಾರಿಗಳು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ನಾವು ಒಳ್ಳೆಯ ಕೆಲಸ ಮಾಡಿದ್ದೇವೆ ಎಂದು ಅವರಿಗೆ ಮನದಟ್ಟಾದರೆ ನಮ್ಮನ್ನು ಗುರುತಿಸುತ್ತಾರೆ. ಎಲ್ಲಿ ಸಿಕ್ಕಿದರೂ ನಮ್ಮನ್ನು ಗೌರವದಿಂದ ಮಾತನಾಡಿಸುತ್ತಾರೆ. ಉತ್ತಮ ಕೆಲಸ ಮಾಡುವುದರಿಂದ ಹಿರಿಯ ಅಧಿಕಾರಿಗಳ ಜತೆ ಗುರುತಿಸಿಕೊಳ್ಳಬಹುದು ಎಂದು ಹೇಳಿದರು.
ಪೊಲೀಸ್ ಕೆಲಸ ಬಹಳ ಕಷ್ಟರಕರ. ಆದರೂ ಸಾರ್ವಜನಿಕರೊಂದಿಗೆ ಉತ್ತಮ ಬಾಂದವ್ಯವನ್ನು ಹೊಂದಬೇಕು. ಪೊಲೀಸ್ ಠಾಣೆಯನ್ನು ದೇವಸ್ಥಾನ ಎಂದು ತಿಳಿದು ತಮ್ಮ ಕಷ್ಟಗಳನ್ನು ಪರಿಹರಿಸಿಕೊಳ್ಳಲು ಸಾರ್ವಜನಿಕರು ಠಾಣೆಗೆ ಬರುತ್ತಾರೆ. ಅವರಿಗೆ ಗೌರವ ನೀಡಿ ಅವರ ಕಷ್ಟಗಳನ್ನು ಕೇಳುವ ಮೂಲಕ ಜನರಿಗೆ ಸ್ಪಂದಿಸಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ನಿವೃತ್ತ ಪಿಐ ತಿಮ್ಮರಾಜು, ನಾಗಮ್ಮ, ಮಂಜುಳ, ನಾಗೇಶ್, ಚಂದ್ರಶೇಖರ್, ಶಿವಕುಮಾರ್, ರಾಜುನಾಯಕ್, ಚಂದ್ರಶೇಖರ್, ಅಶ್ವಥ್ ಹಾಗೂ ಪುಟ್ಟಬಸಪ್ಪ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಪದ್ಮಿನಿ ಸಾಹು ಅವರು ಶಾಲು ಹೊದಿಸಿ ಸನ್ಮಾನಿಸಿ, ಪೊಲೀಸ್ ಧ್ವಜ ನೀಡಿ ಗೌರವಿಸಿದರು.
ಇದಕ್ಕೂ ಮೊದಲು, ನಿವೃತ್ತ ಪಿಐ ತಿಮ್ಮರಾಜು ಅವರು ಪೊಲೀಸ್ ತುಕಡಿಗಳಿಂದ ವಂದನೆ ಸ್ವೀಕರಿಸಿದರು. ಆ ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಅವರು ಪೊಲೀಸ್ ಧ್ವಜಗಳ ಬಿಡುಗಡೆ ಮಾಡಿದರು. ಐವತ್ತು, ನೂರು, ಐದುನೂರು ಹಾಗೂ ಒಂದು ಸಾವಿರ ರೂ. ಮುಖ ಬೆಲೆಯ ಧ್ವಜವನ್ನು ವಿತರಣೆ ಮಾಡ ಲಾಯಿತು.
ಕಾರ್ಯಕ್ರಮದಲ್ಲಿ ಎಎಸ್ಪಿ ಉದೇಶ್, ಡಿಆರ್ ಡಿವೈಎಸ್ಪಿ ಶಂಕರೇ ಗೌಡ, ಡಿವೈಎಸ್ಪಿ ಲಕ್ಷ್ಮಯ್ಯ, ಪೊಲೀಸ್ ಸಿಬ್ಬಂದಿ ಇದ್ದರು.
2ಸಿಎಚ್ಎನ್.1: ಚಾಮರಾಜನಗರದ ಪೊಲೀಸ್ ಕವಾಯಿತು ಮೈದಾನದಲ್ಲಿ ನಡೆದ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಪೊಲೀಸ್ ಧ್ವಜಗಳ ಬಿಡುಗಡೆ ಮಾಡಿದರು.
2ಸಿಎಚ್ಎನ್.1ಬಿ: ಚಾಮರಾಜನಗರದ ಪೊಲೀಸ್ ಕವಾಯಿತು ಮೈದಾನದಲ್ಲಿ ನಡೆದ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ನಿವೃತ್ತ ಪೊಲೀಸ್ ಸಿಬ್ಬಂದಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.