ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರು ಜಿಲ್ಲೆ ಮೈಸೂರಲ್ಲಿ ಮತ್ತು ಅವರ ಸಮ್ಮುಖದಲ್ಲೇ ಕಾರ್ಯಕರ್ತರು ಯಾವುದೋ ಒಂದು ವಿಷಯಕ್ಕೆ ರೊಚ್ಚಿಗೆದ್ದು ಗಲಾಟೆ ಮಾಡಿದ್ದಾರೆ. ಚಾಮುಂಡೇಶ್ವರಿ ಕ್ಷೆತ್ರದಲ್ಲಿ ಸಿದ್ದರಾಮಯ್ಯ ಕಾರ್ಯಕರ್ತರ ಸಭೆಯೊಂದನ್ನು ನಡೆಸುವಾಗ ಕಾರ್ಯಕರ್ತರ ಒಂದು ಗುಂಪು ವೇದಿಕೆಯ ಪಕ್ಕದಲ್ಲಿದ್ದ ಮುಖಂಡರೊಬ್ಬರ ವಿರುದ್ಧ ಕೂಗಾಡಲಾರಂಭಿಸಿತು. ವಿಷಯ ಏನು ಅಂತ ಗೊತ್ತಾಗಲಿಲ್ಲ, ವೇದಿಕೆಯ ಮೇಲೆ ಸಿದ್ದರಾಮಯ್ಯ ಕೂತಿರುವ ಅಂಶವನ್ನು ಸಹ ಕಾರ್ಯಕರ್ತರು ಗಣನೆಗೆ ತೆಗೆದುಕೊಳ್ಳಲಿಲ್ಲ. ಕೊನೆಗೆ ಮುಖ್ಯಮಂತ್ರಿಯವರೇ ಕೈಯಲ್ಲಿ ಮೈಕ್ ಹಿಡಿದು ರೊಚ್ಚಿಗೆದ್ದ ಕಾರ್ಯಕರ್ತರನ್ನು ಸುಮ್ಮನಾಗಿಸಬೇಕಾಯಿತು.