ಪ್ರತಿನಿಧಿ ವರದಿ ಹುಣಸೂರು
ದಾಖಲೆಯಿಲ್ಲದೇ ಸಾಗಿಸುತ್ತಿದ್ದ ೧.೮೪ ಲಕ್ಷ ರೂ.ಗಳನ್ನು ತಾಲೂಕಿನ ಉಮ್ಮತ್ತೂರು ಚೆಕ್ಪೋಸ್ಟ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಸೋಮವಾರ ತಡರಾತ್ರಿ ಎಚ್.ಡಿ.ಕೋಟೆ ರಸ್ತೆಯಿಂದ ಹುಣಸೂರಿಗೆ ತೆರಳುತ್ತಿದ್ದ ಟಾಟಾ ಇಟ್ರಾ ಗೂಡ್ಸ್ ವ್ಯಾನ್ನನ್ನು ಉಮ್ಮತ್ತೂರು ಚೆಕ್ಪೋಸ್ಟ್ ಅಧಿಕಾರಿ ಎಂ.ಎಂ.ಮಂಜುನಾಥ್ ಮತ್ತವರ ತಂಡ ತಡೆದುನಿಲ್ಲಿಸಿ ಪರಿಶೀಲಿಸಿದಾಗ ೧.೮೪,೭೬೦ ರೂ.ಗಳ ನಗದುಹಣ ಪತ್ತೆಯಾಯಿತು. ಸೂಕ್ತ ದಾಖಲೆಗಳನ್ನು ನೀಡಲು ವಿಫಲರಾದ ಕಾರಣ ಹಣವನ್ನು ಸರ್ಕಾರಿ ಖಜಾನೆಗೆ ಜಮಾ ಮಾಡಲಾಯಿತು.
ಹುಣಸೂರಿನ ಎಸ್ಎಲ್ವಿ ಏಜೆನ್ಸಿ ಮಾಲೀಕ ಅರುಣ್ ಕುಮಾರಿಗೆರಿಗೆ ಸೇರಿದ ಹಣ ಇದಾಗಿದ್ದು, ವ್ಯಾನ್ನಲ್ಲಿ ಮಾಲೀಕರೊಂದಿಗೆ ಚಾಲಕ ದಿಲೀಪ್ ಇದ್ದರು. ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡ ನಂತರ ಸೂಕ್ತ ದಾಖಲೆ ಒದಗಿಸಿ ಹಣ ಹಿಂಪಡೆಯುಬಹುದು ಎಂದು ತಹಸೀಲ್ದಾರ್ ಎಂ.ನಯನಾ ತಿಳಿಸಿದರು.
ಪರಿಶೀಲನೆ ವೇಳೆ ಚುನಾವಣಾ ಸಿಬ್ಬಂದಿ ಪ್ರಭಾಕರ್, ಫ್ಲೆಂಯಿಂಗ್ ಸ್ಕ್ವಾಡ್ ತಂಡದ ಅನಿಲ್ಕುಮಾರ್, ಪೊಲೀಸ್ ಪೇದೆಗಳಾದ ಬಸವರಾಜು, ಜಯಚಂದ್ರ, ಪೋಟೋಗ್ರಾಫರ್ ಮಂಜು ಇದ್ದರು.
೨ಊUಓ೫: ಹುಣಸೂರು ತಾಲೂಕು ಉಮ್ಮತ್ತೂರು ಚೆಕ್ಪೋಸ್ಟ್ ನಲ್ಲಿ ದಾಖಲೆಯಿಲ್ಲದೆ ವಾಹನದಲ್ಲಿ ಸಾಗಿಸುತ್ತಿದ್ದ ೧,೮೪,೭೬೦ ರೂ.ಗಳನ್ನು ಚುನಾವಣಾ ಸಿಬ್ಬಂದಿ ವಶಪಡಿಸಿಕೊಂಡರು. ತಹಸೀಲ್ದಾರ್ ಎಂ.ನಯನಾ, ಚೆಕ್ಪೋಸ್ಟ್ ಅಧಿಕಾರಿ ಎಂ.ಎಂ.ಮಂಜುನಾಥ್, ಪ್ರಭಾಕರ್, ಬಸವರಾಜು, ಜಯಚಂದ್ರ ಇತರರಿದ್ದಾರೆ.