ಮಂಡ್ಯ: ಸಕ್ಕರೆ ನಾಡಲ್ಲಿ ಮೈತ್ರಿ ಶಕ್ತಿ ಪ್ರದರ್ಶನಕ್ಕೆ ಸಕಲ ಸಿದ್ಧತೆ ನಡೆದಿವೆ. ಬಹಿರಂಗ ಸಮಾವೇಶಕ್ಕೆ ಭರ್ಜರಿ ತಯಾರಿ ಮಾಡಲಾಗುತಿದೆ. ಇಂದು ಸಂಜೆ 11 ಗಂಟೆಗೆ ಬೃಹತ್ ಸಮಾವೇಶವು ನಡೆಯಲಿದೆ. ಸರ್ಕಾರಿ ಬಾಲಕರ ಕಾಲೇಜಿನ ಆವರಣದಲ್ಲಿ ಈ ಸಮಾವೇಶವು ನಡೆಯಲಿದೆ.
ಕುಮಾರಸ್ವಾಮಿ ನಾಮಪತ್ರದ ಸಲ್ಲಿಕೆ ನಂತರ ಈ ಸಮಾವೇಶವು ನಡೆಯುತ್ತಿದೆ. ಈ ಸಮಾವೇಶದಲ್ಲಿ ಎಚ್.ಡಿ.ಕುಮಾರಸ್ವಾಮಿ, ಗೋವಾ ಸಿಎಂ ಪ್ರಮೋದ್ ಸಾವಂತ್, ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಗಣ್ಯರು ಭಾಗಿಯಾಗುವರು.
ಈಗಾಗಲೇ ನಿರ್ಮಾಣಗೊಂಡಿರುವ ಬೃಹತ್ ವೇದಿಕೆ ಸಮಾವೇಶಕ್ಕೆ ಅದ್ಭುತ ರೂಪ ಕೊಟ್ಟಿದೆ. ಸದ್ಯ ಸಮಾವೇಶಕ್ಕೆ ಕೊನೆ ಹಂತದ ಸಿದ್ಧತೆಗಳು ಪ್ರಗತಿಯಲ್ಲಿವೆ.