ಮಂಡ್ಯ: ಒಂದೂವರೆ ಎರಡು ಲಕ್ಷ ಲೀಡ್ನಲ್ಲಿ ಗೆದ್ದು ಸಂಸದರಾಗಿರುವ ಎಚ್.ಡಿ.ಕುಮಾರಸ್ವಾಮಿ ಅವರೇ… ಎಂದು ಚುನಾವಣೆಗೂ ಮುನ್ನವೇ ಫಲಿತಾಂಶ ಪ್ರಕಟಿಸಿದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ. ಕುಮಾರಸ್ವಾಮಿ ರಾಜ್ಯದ ಯಾವುದೇ ಕ್ಷೇತ್ರದಲ್ಲಿ ನಿಂತರೂ ಗೆಲ್ಲುತ್ತಾರೆ. ನೀವು, ನಿಮ್ಮ ಸಂಬಂಧಿಕರು ಮತ ಹಾಕಿದರೇ ಕುಮಾರಸ್ವಾಮಿ ಎರಡು ಲಕ್ಷ ಲೀಡ್ನಲ್ಲಿ ಗೆಲ್ತಾರೆ. ಎಂದು ಹೇಳಿದರು.
ಸಿದ್ದರಾಮಯ್ಯ ಅವರೇ ಕಿಶಾನ್ ಸಮ್ಮಾನ್ ಯೋಜನೆಯಲ್ಲಿ 4000 ರೂ. ಕೊಡುತ್ತಿದ್ದೆ, ಭಾಗ್ಯಲಕ್ಷ್ಮಿ ಯೋಜನೆಯಿಂದ ಲಕ್ಷಾಂತರ ಹೆಣ್ಣು ಮಕ್ಕಳಿಗೆ ಅನುಕೂಲ ಆಗುತ್ತಿತ್ತು. ಅದರೆ
ಯಾಕೆ ನಿಲ್ಲಿಸಿದ್ರಿ ಹೇಳಿ ಅಂತ ಪ್ರೇಶ್ನಿಸಿದರು.
ರಾಜ್ಯದ 28ಕ್ಕೆ 28 ಸೀಟ್ ಗೆಲ್ಲುತ್ತೇವೆ. ಬೆಂಗಳೂರು ಗ್ರಾಮಾಂತರದಲ್ಲಿ ಡಾ.ಸಿ.ಎನ್.ಮಂಜುನಾಥ್ ನಾಮಪತ್ರಕ್ಕೆ ಹೋಗುತ್ತಿದ್ದೇನೆ. ಮೈಸೂರಿನಲ್ಲಿ ಯದುವೀರ್ ದೊಡ್ಡ ಅಂತರದಲ್ಲಿ ಗೆಲ್ಲುತ್ತಾರೆ ಮತ್ತು ಚಾಮರಾಜನಗರದಲ್ಲಿ ಎಸ್.ಬಾಲರಾಜ್ ಗೆದ್ದೇ ಗೆಲ್ಲುತ್ತಾರೆ. ನಿಮ್ಮ ಬಂಧುಗಳಿಗೆ ಹೇಳಿ ಮತ ಕೊಡಿಸಿ. ನಾವು ಕುಮಾರಸ್ವಾಮಿ ಅವರನ್ನು ಕರೆದುಕೊಂಡು ಮೋದಿ ಬಳಿಗೆ ಹೋಗುತ್ತೇನೆ. ಎಂದು ತಿಳಿಸಿದರು.