ಪ್ರತಿನಿಧಿ ವರದಿ ಎಚ್.ಡಿ. ಕೋಟೆ
ತಾಲೂಕು ವಕೀಲರ ಸಂಘದ ಕಾರ್ಯಕಾರಣಿ ಮಂಡಳಿ ವತಿಯಿಂದ ನಡೆದ ಚುನಾವಣೆಯಲ್ಲಿ ಅತ್ಯಂತ ಬಹುಮತದಿಂದ ನನ್ನನ್ನು ಜಯಶೀಲರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಗಂಗರಾಜು ತಿಳಿಸಿದರು.
ಎಚ್ .ಡಿ. ಕೋಟೆ ಪಟ್ಟಣದ ನ್ಯಾಯಾಲಯಗಳ ಸಂಕೀರ್ಣದ ಆವರಣದಲ್ಲಿ ಮಂಗಳವಾರ ನಡೆದ ತಾಲೂಕು ವಕೀಲರ ಸಂಘದ ಕಾರ್ಯಕಾರಿ ಚುನಾವಣೆಯಲ್ಲಿ ಜಯಗಳಿಸಿದ ಬಳಿಕ ಮಾತನಾಡಿದರು.
ತಾಲೂಕು ವಕೀಲ ವಕೀಲರ ಸಂಘವು ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿದ್ದು ಮುಂದಿನ ದಿನಗಳಲ್ಲಿ ಸಹ ಸಂಘದ ಅಭಿವೃದ್ಧಿಗೆ ಶ್ರಮಿಸುತ್ತಾ ಸಮಾಜಮುಖಿ ಕೆಲಸಗಳನ್ನು ಮಾಡಲಾಗುವುದು ಅಲ್ಲದೆ ತಾಲೂಕಿನಲ್ಲಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಕಾನೂನಿನ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.
ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎಸ್. ಗಂಗರಾಜು, ಉಪಾಧ್ಯಕ್ಷರಾಗಿ ಚಿಕ್ಕನಾಯಕ ಎಂ.ಸಿ. ,ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದಪ್ಪಾಜಿ, ಜಂಟಿ ಕಾರ್ಯದರ್ಶಿಯಾಗಿ ಬಿ. ಮಣಿರಾಜು, ಖಜಾಂಚಿಯಾಗಿ ಎಸ್.ಕೆ. ಮಹೇಶ್ ಆಯ್ಕೆಯಾದರು.
ಈ ವೇಳೆ ಎ.ಟಿ. ಕೃಷ್ಣ, ಸೋಮಶೇಖರ್, ರಮೇಶ್ ಬಿ.ಎಚ್, ಪಿ. ನಾಗೇಂದ್ರ, ಶಶಿಧರ್, ಮಹೇಶ್, ದೊರೆಸ್ವಾಮಿ, ಉಮಾಶಂಕರ್, ಹನುಮೇಶ್, ರೂಪೇಶ್ ಕುಮಾರ್, ಜೆ.ಸಿ.ಕುಮಾರ್, ಎಚ್.ಜಿ. ವೆಂಕಟೇಶ್, ಮಹೇಶ್ ಬಿ.ಎನ್. ಶ್ರೀಕಂಠ ಇದ್ದರು.