ದೇವನಹಳ್ಳಿ: ಹಸಿರು ಕ್ರಾಂತಿಯ ಹರಿಕಾರ ಬಾಬುಜಗಜೀವನ್ ರಾಮ್ ಅವರ 117ನೇ ಜಯಂತಿಯ ಪ್ರಯುಕ್ತ ಸಾರ್ವಜನಿಕ ಸಂಪರ್ಕ ಕೇಂದ್ರದಲ್ಲಿ ಸಂಸ್ಥಾಪಕರಾದ ಟಿ.ಎಂ.ಸಹದೇಶ್ ಅವರು ಪುಷ್ಪ ನಮನ ಸಲ್ಲಿಸಿದರು. ಬಳೀಕ ಮಾತನಾಡಿ, ನಮ್ಮ ಸಂಸ್ಥೆಯ ವತಿಯಿಂದ ಬುದ್ಧ, ಬಸವ, ಅಂಬೇಡ್ಕರ್, ಕುವೆಂಪು, ನಾರಾಯಣ ಗುರು, ಪೆರಿಯಾರ್, ಟಿಪ್ಪುಸುಲ್ತಾನ್, ವಾಲ್ಮೀಕಿ, ಕೆಂಪೇಗೌಡರು ಇನ್ನು ಸಾವಿರಾರು ಸಮಾಜ ಸುಧಾರಕರುಗಳಿಗೆ ಸರಿಸಮಾನವಾಗಿ ಗೌರವ ಸಮರ್ಪಣೆ ಮಾಡಿಕೊಂಡು ಬರುತ್ತಿದ್ದು, ಅದೇ ರೀತಿಯಾಗಿ ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನ ರಾಮ್ ಅವರು ಕೂಡ ಧೀನ ದಲಿತರ ನಾಯಕರಾಗಿದ್ದರು ಎಂದರು. ನಮ್ಮ ಸಂಸ್ಥೆಯ ವತಿಯಿಂದ ನಾವು ಜಾತ್ಯತೀತವಾಗಿ ಮತ್ತು ಪಕ್ಷಾತೀತವಾಗಿ ಕೆಲಸ ನಿರ್ವಹಿಸುತ್ತಿದ್ದೇವೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ದೇವನಹಳ್ಳಿಯ ಸಮಾಜ ಸೇವಕರಾದ ಶ್ರೀನಿವಾಸ್ ರವರು ಹಾಗೂ ಹಲವು ಮುಖಂಡರು ಉಪಸ್ಥಿತರಿದ್ದರು.
5ಡಿಎಚ್ಎಲ್ ಪಿ-೧
ಹಸಿರು ಕ್ರಾಂತಿಯ ಹರಿಕಾರರಾದ ಬಾಬುಜಗಜೀವನ್ ರಾಮ್ ಅವರ 117ನೇ ಜಯಂತಿಯ ಪ್ರಯುಕ್ತ ಸಾರ್ವಜನಿಕ ಸಂಪರ್ಕ ಕೇಂದ್ರದಲ್ಲಿ ಸಂಸ್ಥಾಪಕರಾದ ಟಿ.ಎಂ.ಸಹದೇಶ್ ಅವರು ಪುಷ್ಪ ನಮನ ಸಲ್ಲಿಸಿದರು.