ಪ್ರತಿನಿಧಿ ವರದಿ ಮಾಲೂರು
ಕರ್ನಾಟಕ ಪ್ರದೇಶ ಕಾರ್ಮಿಕರ ವಿಭಾಗದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಮಿಟ್ಟಗಾನಹಳ್ಳಿ ಎಂ.ಎನ್.ವೆಂಕಟೇಶ್, ತಾಲೂಕು ಅಧ್ಯಕ್ಷರಾಗಿ ಎ.ಎನ್.ಚಿನ್ನಪ್ಪ ಅವರನ್ನು ನೇಮಕ ಮಾಡಲಾಗಿದೆ.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಕರ್ನಾಟಕ ಕಾಂಗ್ರೆಸ್ ಪ್ರದೇಶ ಕಾರ್ಮಿಕ ವಿಭಾಗದ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಪದಾಧಿಕಾರಿಗಳಿಗೆ ಆದೇಶ ಪತ್ರವನ್ನು ಶಾಸಕ ಕೆ.ವೈ.ನಂಜೇಗೌಡ ವಿತರಿಸಿದರು.
ಕಾರ್ಯದರ್ಶಿ ಮುಳಬಾಗಲಪ್ಪ, ಉಪಾಧ್ಯಕ್ಷ ಅಯುಬ್ ಖಾನ್, ಬಿ.ಸಿ.ಮಂಜುನಾಥ್, ನಾರಾಯಣಸ್ವಾಮಿ, ಪ್ರತಾಪ್, ಸಂತೇಹಳ್ಳಿ ರವಿ, ಪುರಸನಹಳ್ಳಿ ಮುನಿನಾರಾಯಣ, ಬ್ಯಾಟರಾಯನಹಳ್ಳಿ ಅಮರೇಶ್, ಮಾಸ್ತಿ ಬ್ಲಾಕ್ ಅಧ್ಯಕ್ಷ ವಾಸೀಮ್, ಮಹಿಳಾ ಘಟಕ ಪ್ರಧಾನ ಕಾರ್ಯದರ್ಶಿ ಶ್ಯಾಮಲಾ, ಮಾಲಾ ಸೇರಿದಂತೆ ಹಲವಾರು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಕೆಪಿಸಿಸಿ ಸದಸ್ಯರಾದ ಸೋಮಣ್ಣ, ಎಂ.ಎಸ್ ಪ್ರದೀಪ್ ರೆಡ್ಡಿ, ರಾಜ್ಯ ಉಪಾಧ್ಯಕ್ಷ ಮೋಹನ್, ಜಂಟಿ ಕಾರ್ಯದರ್ಶಿ ಯಲ್ಲಪ್ಪ, ಜಿಲ್ಲಾಧ್ಯಕ್ಷ ಎನ್.ರಾಜಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಜಿ.ಮಧುಸೂದನ್, ದರಖಾಸ್ತು ಸಮಿತಿ ಅಧ್ಯಕ್ಷ ಹನುಮಂತಪ್ಪ, ಸದಸ್ಯರಾದ ನಾಗಪುರ ನವೀನ್, ಮಂಜುನಾಥ್ ರೆಡ್ಡಿ, ಪುರಸಭಾ ಸದಸ್ಯರಾದ ಎನ್.ವಿ.ಮುರಳೀಧರ್, ಜಾಕೀರ್ ಖಾನ್, ಮುಖಂಡರಾದ ತಿಮ್ಮೇಗೌಡ, ಎಸ್.ವಿ.ಗೋರ್ವದನ್ ರೆಡ್ಡಿ, ಹನುಮಂತರೆಡ್ಡಿ ಹಾಜರಿದ್ದರು.