ಕೊಳ್ಳೇಗಾಲ ಪಟ್ಟಣದ ಮುಡಿಗುಂಡ ಬಡಾವಣೆ ನಿವಾಸಿ ಹಾಗೂ ಚಿತ್ರ ಕಲಾವಿದ ಜೆ.ಮೂರ್ತಿ ಅವರಿಗೆ ಇತ್ತೀಚೆಗೆ ಕೆ.ಆರ್.ನಗರ ತಾಲೂಕಿನ ಕಪ್ಪಡಿ ಶ್ರೀಕ್ಷೇತ್ರದಲ್ಲಿ ನಡೆದ ಜಾತ್ರಾ ಮಹೋತ್ಸವದಲ್ಲಿ ಮಳವಳ್ಳಿ ಆದಿ ಹೊನ್ನಾಯಕನಹಳ್ಳಿಯ ಶ್ರೀ ಮಂಟೇಸ್ವಾಮಿ ಮಠ ಮತ್ತು ಶ್ರೀ ಕಪ್ಪಡಿ ಕ್ಷೇತ್ರದ ಮಠಾಧಿಪತಿ ಶ್ರೀ ವರ್ಚಸ್ವೀ ಶ್ರೀಕಂಠಸಿದ್ದಲಿಂಗ ರಾಜೇಅರಸ್ ಸ್ವಾಮೀಜಿ ಅವರು 2024ನೇ ಸಾಲಿನ ಕುಂಚ ಕಲಾಶ್ರೀ ಪ್ರಶಸ್ತಿ ನೀಡಿ ಗೌರವಿಸಿದರು.