ಚಿಕ್ಕಮಗಳೂರಿನಲ್ಲಿ ತೊಂದರೆ। ಮಲೆನಾಡು ಭಾಗದಲ್ಲಿಯೆ ಕುಡಿವ ನೀಡಿಗೆ ತತ್ವಾರ
ಡಿ.ವಿ ಸಂಜಯ್ ಚಿಕ್ಕಮಗಳೂರು
ಕಳೆದ ಕೆಲವು ವರ್ಷಗಳ ಬಳಿಕ ಮಲೆನಾಡು, ಅರೆ ಮಲೆನಾಡು ಪ್ರದೇಶವಾದ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಮಳೆ ಇಲ್ಲದೆ ಬರಗಾಲ ಉಂಟಾಗಿದು ಮಲೆನಾಡು ಭಾಗದಲ್ಲಿಯೆ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತಿದೆ.
ಮಲೆನಾಡು ಪ್ರದೇಶಗಳಾದ ಚಿಕ್ಕಮಗಳೂರು, ಬಾಳೆಹೊನ್ನೂರು, ಆಲ್ದೂರು, ಪಟ್ಟಣಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು ಹಲವರು ಟ್ಯಾಂಕರ್ಗಳಲ್ಲಿ ನೀರು ಸರಬರಾಜು ಮಾಡಿಸಿಕೊಳ್ಳುತ್ತಿದ್ದಾರೆ. ತರೀಕೆರೆ, ಕಡೂರು, ಅಜ್ಜಂಪುರ ಭಾಗಗಳಲ್ಲಿ ಕೂಡ ಟ್ಯಾಂಕರ್ಗಳಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ.
ಅಲ್ಲದೆ ಈ ಭಾಗದ 60 ಕ್ಕು ಹೆಚ್ಚು ಹಳ್ಳಿಗಳಲ್ಲಿ ನೀರಿನ ಅಭಾವ ತೀವ್ರವಾಗಿದೆ. ಜಿಲ್ಲೆಯ ನದಿ, ಕೆರೆಗಳಲ್ಲಿ ಕೂಡ ನೀರಿನ ಪ್ರಮಾಣ ಕಡಿಮೆಯಾಗಿದೆ. ಈ ಬಾರಿ ಜಿಲ್ಲೆಯಲ್ಲಿ ಬಿಸಿಲಿನ ತಾಪ ತೀವ್ರ ವಾಗಿದ್ದು ಶನಿವಾರ 36 ಡಿಗ್ರಿ ಉಷ್ಣಾಂಶ ದಾಖಲಾಗಿದೆ. ನಿತ್ಯ ಇದೇ ಪ್ರಮಾಣದಲ್ಲಿ ದಾಖಲಾಗುತಿದ್ದು ಮನೆಯಿಂದ ವಯೋವೃದ್ದರಿಗೆ, ಮಕ್ಕಳಿಗೆ ಹೊರಬಾರಲು ಕಷ್ಟವಾಗುತ್ತಿದೆ. ಮಳೆ ಇಲ್ಲದ ಕಾರಣ ಆನೇಕ ಕಡೆಗಳಲ್ಲಿ ಸೊಳ್ಳೆಗಳು ಹೆಚ್ಚಾಗಿದ್ದು, ನಗರ ಗ್ರಾಮೀಣ ಭಾಗ ಎನ್ನದೆ ಶೀತ , ಉರಿ ಉಷ್ಣ, ಜ್ವರ, ಮೈ ಕೈ ನೋವು, ಸುಸ್ತು ಜನರಿಗೆ ತೊಂದರೆಯಾಗುತ್ತಿದೆ. ನಿತ್ಯ ಆಸ್ಪತ್ರೆಗೆ ಭೇಟಿ ನೀಡುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ನಗರಗಳಲ್ಲಿ ತಂಪು ಪಾನೀಯ, ಎಳನೀರು ವ್ಯಾಪಾರ ಜೋರಾಗಿದೆ.
ಈಗಾಗಲೆ ಸರ್ಕಾರ ಜಿಲ್ಲೆಯ ಕಡೂರು, ಅಜ್ಜಂಪುರ ತಾಲೂಕನ್ನು ತೀವ್ರ ಬರ ಪೀಡಿತ ಹಾಗು ಕಳಸ, ಎನ್.ಆರ್ ಪುರ, ಕೊಪ್ಪ, ಶೃಂಗೇರಿ ತಾಲೂಕುಗಳನ್ನು ಸಾಧಾರಣ ಬರ ಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸಿದೆ. ಜಿಲ್ಲೆಯ ಹೇಮಾವತಿ, ತುಂಗಾ, ಭದ್ರಾ ನದಿಗಳಲ್ಲಿ ಕೂಡ ನೀರಿನ ಹರಿವು ಗಣನೀಯವಾಗಿ ಇಳಿಕೆಯಾಗಿದ್ದು ಕೃಷಿ ಕಾರ್ಯಕ್ಕೆ ಸಮಸ್ಯೆ ಉಂಟಾಗುತ್ತಿದೆ. ಹಲವೆಡೆ ಕಾಫಿ, ಅಡಿಕೆ, ತೆಂಗು ಕಾಳು ಮೆಣಸು ನೀರಿಲ್ಲದೆ ಒಣಗಲಾರಂಭಿಸಿದೆ. ಮಲೆನಾಡು ಭಾಗದಲ್ಲಿ ಕಾಪಿಗಿಡಗಳಲ್ಲಿ ಮೊಗ್ಗುಗಳಾಗಿದ್ದು ಮಳೆ ಇಲ್ಲದೆ ಹೂವು ಅರಳುವುದು ತಡವಾಗಿದೆ. ಕೃಷಿ ಚಟುವಟಿಕೆಗಳು ಕೂಡ ಸ್ಥಗಿತವಾಗಿದೆ. ಆಲ್ಡೂರು, ಮಲ್ಲೇನಹಳ್ಳಿ, ಹೊಸರೋಡು, ಅತ್ತಿಗುಂಡಿ, ಮಹಲ್ ಭಾಗಗಳ ಕೆಲವೆಡೆ ಕಾಫಿ ಗಿಡಗಳು ಒಣಗಲಾರಂಭಿಸಿದೆ. ಹೊಸರೋಡು, ಮಾವಿನಳ್ಳ ಸೇರಿ ಕೆಲವೆಡೆ ಫಸಲು ಬಿಡುತ್ತಿದ್ದ ಕಾಳು ಮೆಣಸು ಬಳ್ಳಿಗಳು ಒಣಗಿಹೋಗಿವೆ. ಮಲೆನಾಡು ಭಾಗವಾದ ಕಳಸ ಗ್ರಾಮದ ಕೆಲವೆಡೆ ರೋಬಸ್ಟಾ ಗಿಡದಲ್ಲಿ ಕಾಫಿ ಮಿಡಿ ಕಾಯಿಗಳು ಒಣಗಿವೆ.
ತೀವ್ರ ಬಿಸಿಲಿನ ಕಾರಣ ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಕೂಡ ಕಡಿಮೆಯಾಗಿದೆ. ವಾರಾಂತ್ಯದಲ್ಲಿ ಜಿಲ್ಲೆಯ ಗಿರಿಶ್ರೇಣಿಗೆ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಿದ್ದರು. ಕಳೆದ ಒಂದು ತಿಂಗಳಿನಿAದ ಪ್ರವಾಸಿಗರು ಭೇಟಿ ನೀಡುವುದು ಕಡಿಮೆಯಾಗಿದೆ. ಮಧ್ಯಾಹ್ನದ ವೇಳೆ ನಗರದ್ಲಲಿ ರಸ್ತೆಗಳು ಖಾಲಿ ಹೊಡೆಯುತ್ತಿವೆ. ಮಳೆಗಾಗಿ ಜಿಲ್ಲೆಯ ಎನ್.ಆರ್ ಪುರ, ಶೃಂಗೇರಿ ಭಾಗಗಳಲ್ಲಿ ದೇವರೀಗೆ ವಿಶೇಷ ಪೂಜೆ, ಹೋಮ ಪ್ರಾರ್ಥನೆಗಳನ್ನು ಮಾಡಲಾಗಿದೆ.
ಇನ್ನು ಜಿಲ್ಲೆಯಲ್ಲಿ ಮಳೆ ಇಲ್ಲದೆ ನೀರಿನ ಸಮಸ್ಯೆ ಉಂಟಾದ ಕಾರಣ ನಗರಸಭೆ ಗ್ರಾಮ ಪಂಚಾಯಿತಿಗಳ ಅನುಮತಿ ಇಲ್ಲದೆ ಜನರು ಬೋರ್ವೆಲ್ ಕೊರೆಸಬಾರದು, ನೀರನ್ನು ಪೋಲು ಮಾಡಬಾರದು ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.
ಚಿತ್ರ: ಚಿಕ್ಕಮಗಳೂರು ಸಮೀಪದ ಬೀಕನಹಳ್ಳಿ ಗ್ರಾಮದಲ್ಲಿ ಕೆರೆಯೊಂದು ಸಂಪೂರ್ಣ ಭತ್ತಿ ಹೋಗಿರುವುದು