ಬೇಲೂರು :ತೋಟದ ಕೂಲಿ ಕಾರ್ಮಿಕರು ಕೆಲಸಕ್ಕೆ ತೆರಳುವ ಸಮಯದಲ್ಲಿ ಬೆಳ್ಳಂಬೆಳಗ್ಗೆಯೆ ೩ ಕಾಡಾನೆಗಳು ಕಾಣಿಸಿಕೊಂಡು ಆತಂಕ ಸೃಷ್ಠಿ ಮಾಡಿದ ಘಟನೆಯು ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯ ಇಲಿಯಾಜ್ ಮಾಲೀಕತ್ವದ ಮಾಲಳ್ಳಿ ಕಾಫಿ ಎಸ್ಟೇಟ್ನಲ್ಲಿ ನಡೆದಿದೆ.
ಶುಕ್ರವಾರ ಬೆಳಗ್ಗೆ ಎಸ್ಟೇಟ್ ಸಿಬ್ಬಂದಿ ದಯಾನಂದ್ ಕೆ.ಆರ್ ಹಾಗೂ ಪಕ್ಕದ ತೋಟದ ರೈಟರ್ ಪ್ರಕಾಶ್ರವರು ತೋಟವನ್ನು ಗಸ್ತು ತಿರುಗುತ್ತಿದ್ದ ವೇಳೆ ಮುಂಜಾನೆ ೭.೩೦ಕ್ಕೆ ವಿಕ್ರಾಂತ್,ಕರಡಿ ಹಾಗೂ ಒಂದು ಹೆಣ್ಣಾನೆ ಗೋಚರವಾಗಿದೆ.
ಮುಂಜಾಗೃತ ಕ್ರಮವಾಗಿ ತೋಟದ ಕೂಲಿ ಕಾರ್ಮಿಕರು ಎಸ್ಟೇಟಿಗೆ ಹಾಗೂ ಅಕ್ಕ ಪಕ್ಕದ ತೋಟಗಳಿಗೆ ಕೆಲಸ ನಿರ್ವಹಿಸದಂತೆ ಕ್ರಮವಹಿಸಿ ರಜೆ ಘೋಷಿಸಲಾಗಿತ್ತು. ಸಂಜೆಯವರೆಗೂ ಅಲ್ಲೆ ತಿರುಗಾಡುತ್ತಿದ್ದ ಕಾಡಾನೆಗಳ ಹಿಂಡು ನಂತರ ಬೇರೆಡೆಗೆ ತೆರಳಿದೆ. ಈ ವೇಳೆ ರೋಬಸ್ಟಾ ಹಾಗೂ ಅರೆಬಿಕಾ ಕಾಫಿ ಗಿಡಗಳು ಆನೆಗಳ ಚಲನವಲನದಿಂದ ನಾಶವಾಗಿದೆ.