ಮೂಗೂರು : ಶ್ರೀ ತ್ರಿಪುರ ಸುಂದರಿ ಅಮ್ಮನವರ ದೇವಾಲಯಕ್ಕೆ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ನಂತರ ಮೂಗೂರಿನ ವಾಲ್ಮೀಕಿ ಭವನದಲ್ಲಿ ಆಯೋಜಿಸಿದ್ದ ಕಾರ್ಯಕರ್ತರು ಮತ್ತು ಮುಖಂಡರು ಸಭೆಯಲ್ಲಿ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಮಾತನಾಡಿದರು. ನಮ್ಮ ತಂದೆ ಮಹದೇವಪ್ಪ ಅವರನ್ನು ನಾಲ್ಕು ದಶಕಗಳಿಂದ ಕ್ಷೇತ್ರದಲ್ಲಿ ರಾಜ್ಯ ನಾಯಕರನ್ನಾಗಿ ಬೆಳೆಸಿದ್ದೀರಿ. ನನ್ನನ್ನುತಮ್ಮ ಮನೆ ಮಗನಂತೆ ಬೆಳಸಿ ಎಂದು ಮನವಿ ಮಾಡಿದರು
ಸುಮಾರು 30 ವರ್ಷಗಳಿಂದ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿ ಪಕ್ಷ ಸಂಘಟನೆಯಲ್ಲಿ ಪಾಲ್ಗೊಂಡು ಕೆಲವು ಅವಕಾಶದಿಂದ ವಂಚಿತನಾದ ಈ ಬಾರಿ ನನಗೆ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಹು ಮತದೊಂದಿಗೆ ಜಯಶೀಲ ರಾಗಿಸಬೇಕೇಂದು ಮುಖಂಡರಲ್ಲಿ ಹಾಗೂ ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ನಂತರ ಮಾತನಾಡಿದ ತಿ.ನರಸೀಪುರ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಡಿ.ಬಸವರಾಜು ಮಾತನಾಡಿ, ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳನ್ನು ಮುಖಂಡರು ಹಾಗೂ ಕಾರ್ಯಕರ್ತರು ಜನರ ಮನೆ ಮನೆ ಬಾಗಿಲಿಗೆ ತೆರಳಿ ಮನದಟ್ಟು ಮಾಡಬೇಕೆಂದು ಮನವಿ ಮಾಡಿದರು.
ನುಡಿದಂತೆ ನಡೆದಿರುವ ನಮ್ಮ ಕಾಂಗ್ರೆಸ್ ಪಕ್ಷ ಮತದಾರರು ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಸುನೀಲ್ ಬೋಸ್ ಅವರನ್ನು ಆಶೀರ್ವದಿಸಬೇಕೆಂದು ಮನವಿ ಮಾಡಿದರು.
ಎಂ.ಎಂ.ಬಸವಣ್ಣ, ದೇವನಾಂದ್ ಎಂ ಎನ್ ಸೋಮಣ್ಣ , ಲಕ್ಷ್ಮಿನಾರಾಯಣ, ಎಂ. ಬಿ.ಸಾಗರ್, ಗುರುಸಿದ್ದಪ್ಪ ನಾಗರಾಜು, ಹೊಸಪುರ ಮಲ್ಲು, ಎಂ ರಾಜು, ಎಂ ಜಗದೀಶ್, ಎಂ ಬಿ ಕೃಷ್ಣಸ್ವಾಮಿ, ಮಹೇಶ, ಎಸ್ ಸಿದ್ದರಾಜು, ದಿಲೀಪ, ಮಹದೇವಸ್ವಾಮಿ, ಮಹದೇವ, ಮೂರ್ತಿ, ಲಿಂಗರಾಜು ಮಹದೇವಯ್ಯ , ರಘು ಹಾಜರಿದ್ದರು.