ಪ್ರತಿನಿಧಿ ವರದಿ ಯಳಂದೂರು
ಪಟ್ಟಣ-ಹೊನ್ನೂರು ರಸ್ತೆಯ ಕೆರೆ ಪಕ್ಕದ ಅರಳಿ ಮರದ ಬಳಿ ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ 4.320 ಲೀಟರ್ ಮದ್ಯವನ್ನು ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಮದ್ಯ ಸಾಗಿಸುತ್ತಿದ್ದ ಹೊನ್ನೂರು ಗ್ರಾಮದ ಸಿದ್ದಯ್ಯ ಎಂಬಾತನನ್ನು ವಶಕ್ಕೆ ಪಡೆದು ಮದ್ಯ ಹಾಗೂ ಸ್ಕೂಟರ್ ( 59920 ರೂ.ಮೌಲ್ಯ) ಅನ್ನು ಜಪ್ತಿ ಮಾಡಲಾಯಿತು.
ಚಾಮರಾಜನಗರ ವಲಯ ಅಬಕಾರಿ ನಿರೀಕ್ಷಕ ಎನ್.ಮೋಹನರೆಡ್ಡಿ ಅವರು ಈ ಸಂಬಂಧ ಪ್ರಕರಣವನ್ನು ದಾಖಲಿಸಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ಯಳಂದೂರು ಪಟ್ಟಣದ ಗೌರೀಶ್ವರ ದೇವಸ್ಥಾನ ಮುಂಭಾಗದಲ್ಲಿ ಬೈಕ್ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 3.600 ಲೀ ಮದ್ಯ ಹಾಗೂ 6.500 ಲೀ ಬಿಯರ್ ಅನ್ನು ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಮದ್ಯ ಸಾಗಣೆ ಮಾಡುತ್ತಿದ್ದ ಆರೋಪಿ ಪರಾರಿಯಾಗಿದ್ದು ಮದ್ಯ ಹಾಗೂ ದ್ವಿಚಕ್ರ ವಾಹನವನ್ನು (ಇವುಗಳ ಒಟ್ಟು ಮೌಲ್ಯ 113396 ರೂ.) ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಜಿಲ್ಲಾ ಅಬಕಾರಿ ದಳದ ನಿರೀಕ್ಷಕ ಸುರೇಶ್ ಕುಮಠೆ ಪ್ರಕರಣ ದಾಖಲಿಸಿಕೊಡಿದ್ದಾರೆ.
6ಸಿಎಚ್ಎನ್.3:
ಚಿತ್ರವಿದೆ