ಹನೂರು : ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಅರಣ್ಯ ಪ್ರದೇಶದಲ್ಲಿ ಪಾದಯಾತ್ರೆಗಳು ಬರುವ ಸ್ಥಳಗಳಲ್ಲಿ ಪ್ಲಾಸ್ಟಿಕ್ ಮುಕ್ತ ಮಾಡಲು ಮೈಸೂರು ಪರಿಸರ ವಾರಿಯರ್ಸ್ ತಂಡದ ವತಿಯಿಂದ ಅರಿವು ಮೂಡಿಸಲಾಯಿತು.
ನಂತರ ಮಾತನಾಡಿದ ತಂಡದ ಸದಸ್ಯ ಮಂಜುನಾಥ್ ಅವರು ಬೇಸಿಗೆ ಬಿರು ಬಿಸಿಲಿನಲ್ಲಿ ಪಾದಯಾತ್ರೆಗಳು ಅರಣ್ಯ ಪ್ರದೇಶದಲ್ಲಿ ಭಕ್ತಿ ಪೂರ್ವಕವಾಗಿ ಕರ್ಪೂರವನ್ನು ಹಚ್ಚುವುದರಿಂದ ಗಾಳಿಗೆ ತೂರಿ ಅರಣ್ಯ ಪ್ರದೇಶಕ್ಕೆ ಬೆಂಕಿ ಕಿಡಿಬಿದ್ದು ಅರಣ್ಯವೆಲ್ಲ ಭಸ್ಮವಾಗುತ್ತದೆ ಹೀಗಾಗಿ ಭಕ್ತಾದಿಗಳು ನಿಗದಿತ ಸ್ಥಳವಾದ ತಾಳ್ಬೆಟ್ಟ ರಂಗಸ್ವಾಮಿ ಒಡ್ಡು ಮತ್ತು ದೇವಾಲಯದ ಮುಂಭಾಗ ಹಚ್ಚಬೇಕಾಗಿ ಮನವಿ ಮಾಡಿದರು.
ಪ್ಲಾಸ್ಟಿಕ್ ಮುಕ್ತ ಏಕ ಬಳಕೆಗೆ ಒತ್ತು ನೀಡಿ : ಶ್ರೀ ಕ್ಷೇತ್ರದಲ್ಲಿ ಪ್ಲಾಸ್ಟಿಕ್ ಮುಕ್ತ ಅಭಿಯಾನ ಕಳೆದ ಹಲವಾರು ವರ್ಷಗಳಿಂದ ಹಮ್ಮಿಕೊಳ್ಳಲಾಗಿರುವುದರಿಂದ ಮಾದಪ್ಪನ ಶ್ರೀ ಕ್ಷೇತ್ರಕ್ಕೆ ಬರುವ ಭಕ್ತಾದಿಗಳು ಪ್ಲಾಸ್ಟಿಕ್ ಮುಕ್ತ ಏಕ ಬಳಕೆ ಅಭಿಯಾನಕ್ಕೆ ಸಹಕಾರ ನೀಡುವಂತೆ ಮತ್ತು ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಬಾಟಲ್ ತ್ಯಾಜ್ಯಗಳನ್ನು ನಿಗದಿತ ಸ್ಥಳಗಳಲ್ಲಿ ಹಾಕುವಂತೆ ಮನವಿ ಮಾಡಿದರು. ಇದೆ ಸಂದರ್ಭದಲ್ಲಿ ಮೈಸೂರು ಪರಿಸರ ವಾರಿಯರ್ಸ್ ತಂಡದ ಸದಸ್ಯರು ಹಾಗೂ ಅರಣ್ಯ ಇಲಾಖೆಯ ನೌಕರರು ಹಾಗೂ ಭಕ್ತರು ಇದ್ದರು.