ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಕ್ಕರೆ ಗ್ರಾಮದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಗ್ರಾಮ ದೇವತೆ ಶ್ರೀ ಬಾಲಚಂದ್ರ ಬಸವೇಶ್ವರ ಸ್ವಾಮಿ ಆಶೀರ್ವಾದ ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಭಾನುವಾರ ಬಿಪಿಎಲ್ ಸೀಸನ್ 1ರ ಕ್ರಿಕೆಟ್ ಟೂರ್ನಿಗೆ ಚಾಲನೆ ನೀಡಲಾಯಿತು.
ಗ್ರಾಮದ ಹೊರವಲಯದ ಮೂರೂರಮ್ಮ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ನಡೆದ ಕ್ರಿಕೆಟ್ ಟೂರ್ನಿಯಲ್ಲಿ ಬೆಕ್ಕರೆ ಸೂಪರ್ ಕಿಂಗ್ಸ್, ಬೆಕ್ಕರೆ ಟೈಟಾನ್ಸ್, ಬೆಕ್ಕರೆ ಇಂಡಿಯನ್ಸ್,
ಬೆಕ್ಕರೆ ನೈಟ್ ರೈಡರ್, ಬೆಕ್ಕರೆ ಜೈ ಭೀಮ್, ರಾಯಲ್ಸ್ ಚಾಲೆಂಜರ್ಸ್ ಬೆಕ್ಕರೆ, ಕಿಂಗ್ಸ್ ಇಲೆವೆನ್ ಬೆಕ್ಕರೆ,
ಬೆಕ್ಕರೆ ರಾಯಲ್ಸ್ ತಂಡ ಸೇರಿದಂತೆ ಒಟ್ಟು 8 ತಂಡಗಳು ಭಾಗವಹಿಸಿದ್ದವು. ಪಂದ್ಯಗಳು ನಡೆಯುತ್ತಿದ್ದ ವೇಳೆ ಗ್ರಾಮದ ಹಿರಿಯರು ಹಾಗೂ ಮಹಿಳೆಯರು ಕ್ರೀಡಾಂಗಣದಲ್ಲಿ ಹಾಜರಿದ್ದು ಆಟಗಾರರನ್ನು ಪ್ರೋತ್ಸಾಹ ನೀಡುವ ಮೂಲಕ ಸಂಭ್ರಮಿಸಿದರು. ಸೋಮವಾರ ಅಂತಿಮ ಪಂದ್ಯ ನಡೆಯಲಿದೆ.
ನಿವೃತ್ತ ಸೈನಿಕ ರವಿಕುಮಾರ್, ಉದ್ಯಮಿ ಪ್ರಕಾಶ್ ಹಾಗೂ ಇಂಜಿನಿಯರ್ ಸರ್ಪಭೂಷಣ್ ಆರಾಧ್ಯ ಸೇರಿದಂತೆ ಬೆಕ್ಕರೆ ಗ್ರಾಮಸ್ಥರು ಇದ್ದರು.
07ಬಿಟಿಪಿ02:ಬೆಕ್ಕರೆ ಗ್ರಾಮದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಗ್ರಾಮ ದೇವತೆ ಶ್ರೀ ಬಾಲಚಂದ್ರ ಬಸವೇಶ್ವರ ಸ್ವಾಮಿ ಆಶೀರ್ವಾದ ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ನಡೆದ ಬಿಪಿಎಲ್ ಸೀಸನ್ 1ರ ಕ್ರಿಕೆಟ್ ವೇಳೆ ಆಟಗಾರರು ಪರಸ್ಪರ ಪರಿಚಯ ಮಾಡಿಕೊಂಡರು.