ಹುಲ್ಲಹಳ್ಳಿ : ದ್ವಿತೀಯ ಪಿಯು ಪರೀಕ್ಷೆಯಲ್ಲಿ ಮೈಸೂರಿನ ಸರಸ್ವತಿಪುರಂನಲ್ಲಿರುವ ಜೆಎಸ್ಎಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಮಾದನಹಳ್ಳಿ ಗ್ರಾಮದ ತಾಲೂಕು ರೈತ ಸಂಘದ ಅಧ್ಯಕ್ಷ ಮಾದನಹಳ್ಳಿ ಮೂರ್ತಿಯವರ ಅಣ್ಣ ಶಿವಕುಮಾರ್ ಅವರ ಪುತ್ರಿ ಯಮುನಾ 600ಕ್ಕೆ 551 ಅಂಕಗಳನ್ನು ಪಡೆದು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.