ಪ್ರತಿನಿಧಿ ವರದಿ ಮೈಸೂರು
ನಗರದ ನಟನ ರಂಗಶಾಲೆ ವತಿಯಿಂದ ಆಯೋಜಿಸಿರುವ ರಜಾ ಮಜಾ ಬೇಸಿಗೆ ಶಿಬಿರಕ್ಕೆ ಗುರುವಾರ ಚಾಲನೆ ದೊರೆಯಿತು.
ರಾಮಕೃಷ್ಣನಗರದ ನಟನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಪ್ರತಿಮೆ ರಂಗದ ಮೇಲಿರಿಸಿ ಮಲ್ಲಿಗೆ ಮೊಗ್ಗಿನ ಹಾರ ಹಾಕಿ, ಪುಷ್ಪಾರ್ಚನೆ ಮಾಡುವ ಮೂಲಕ ರಾಜಾ ಮಜಾ ಶಿಬಿರ ಪ್ರಾರಂಭವಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ನಟ, ರಂಗಕರ್ಮಿ ಅರುಣ್ ಸಾಗರ್, ನಟನ ನೆಲದ ಮೇಲೆ ಕಟ್ಟಿರುವ ಶಾಲೆಯಲ್ಲ, ನೆಲೆಯ ಮೇಲೆ ಕಟ್ಟಿರುವ ಶಾಲೆಯಾಗಿದೆ. ನಟನ ಕನಸನ್ನು ನನಸಾಗಿಸಿದ ರೂಪಕವಾಗಿದೆ ಎಂದರು.
ನಟ ಸುಚೇಂದ್ರ ಪ್ರಸಾದ್ ಮಾತನಾಡಿ, ರಜಾಮಜಾದಲ್ಲಿ ಸಾವಿರಾರು ಸೂಕ್ಷ್ಮ ಸಂಗತಿಗಳು ಜರಗುತ್ತವೆ. ಮಕ್ಕಳು ಎವೆಯಿಕ್ಕದೆ ನೋಡಬೇಕೆಂದು ಹೇಳಿದರು.
ಚಿತ್ರ ಸಾಹಿತಿ ಡಾ. ವಿ. ನಾಗೇಂದ್ರ ಪ್ರಸಾದ್ ಮಾತನಾಡಿ, ಇಷ್ಟು ವರ್ಷ ಈ ರಂಗಯಾನ ನಡೆಸಿದವರೇ ನಿಜವಾದ ಹೀರೋ ಎಂದು ಬಣ್ಣಿಸಿದರು.
ರವೀಂದ್ರ ಸ್ವಾಮಿಯವರು ಕತೆಯ ಮೊಲಕ ಮಕ್ಕಳನ್ನು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಇಂದಿರಾ ನಾಯರ್, ನಟನ ಪ್ರಾಂಶುಪಾಲ ಮೇಘ ಸಮೀರ, ನಟನದ ನಿರ್ಮಾತೃ ಮಂಡ್ಯ ರಮೇಶ್, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸುದರ್ಶನ್ ಇತರರಿದ್ದರು.
=================