ಹನಗೋಡು: ಸರ್ಕಾರಿ ಪದವಿಪೂರ್ವ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿನಿ ಎ.ಎಂ.ಚೈತ್ರ ಪಿಯುಸಿ ಕಲಾ ವಿಭಾಗದಲ್ಲಿ 580 ಅಂಕಗಳಿಸಿ ಹುಣಸೂರಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಎಕನಾಮಿಕ್ಸ್ ನಲ್ಲಿ 100, ರಾಜ್ಯಶಾಸ್ತ್ರ, ಇತಿಹಾಸ, ಕನ್ನಡದಲ್ಲಿ 99 ಅಂಕಗಳು ಹಾಗೂ ಸಮಾಜಶಾಸ್ತ್ರದಲ್ಲಿ 98 ಅಂಕ ಪಡೆದಿರುವುದಾಗಿ ಕಾಲೇಜಿನ ಪ್ರಾಂಶುಪಾಲ ದೊರೆರಾಜ ತಿಳಿಸಿದ್ದಾರೆ.
ಈಕೆ ಹನಗೋಡು ಸಮೀಪದ ಕಾಡಂಚಿನ ಗ್ರಾಮ ಅಬ್ಬೂರಿನ ರೈತ ಮಂಜುನಾಥ ಶೆಟ್ಟಿ ಹಾಗೂ ಸರಸ್ವತಿ ದಂಪತಿಗಳ ಪುತ್ರಿಯಾಗಿದ್ದು, ಯಾವುದೇ ಮನೆ ಪಾಠ ಹಾಗೂ ಕೋಚಿಂಗ್ ಸೆಂಟರ್ ಗೆ ಹೋಗದೆ ತಾಲೂಕಿಗೆ ಪ್ರಥಮ ಸ್ಥಾನ ಬಂದಿರುವುದು ನಮಗೆ ಹೆಮ್ಮೆಯ ವಿಷಯ ಎಂದು ತಂದೆ ಮಂಜುನಾಥ್ ಖುಷಿ ವ್ಯಕ್ತಪಡಿಸಿದ್ದಾರೆ.