ಪ್ರತಿನಿಧಿ ವರದಿ ಕೊಳ್ಳೇಗಾಲ
ಪಟ್ಟಣದ ಭೀಮನಗರದ ಕಸಬಾ ಮನೆ (ಪರಿಶಿಷ್ಟಜಾತಿ) ದೊಡ್ಡ ಯಜಮಾನರ ಸ್ಥಾನಕ್ಕೆ ಪತ್ರಕರ್ತ ಚಿಕ್ಕಮಾಳಿಗೆ ಶನಿವಾರ 4ನೇ ಬಾರಿಗೆ ಆಯ್ಕೆಯಾಗಿದ್ದಾರೆ.
ಭೀಮನಗರದ ಪನ್ನಾಬೀದಿಯ ಚಾವಡಿಯಲ್ಲಿ ಶನಿವಾರ ಬೆಳಗ್ಗೆ ಆಯೋಜಿಸಿದ್ದ ಕುಲಸ್ಥರು ಹಾಗೂ ದೊಡ್ಡ ಯಜಮಾನರ ಕುಟುಂಬದ ಹಿರಿಯ ಸಭೆಯಲ್ಲಿ ಹಲವರ ಸಲಹೆ ಮತ್ತು ಅಪೇಕ್ಷೆಯಂತೆ ಚಿಕ್ಕಮಾಳಿಗೆ ಆಯ್ಕೆಗೊಂಡಿದ್ದಾರೆ.
ಕಳೆದ 2008 ರಿಂದ ನಾಲ್ಕು ವರ್ಷಗಳ ಕಾಲ ದೊಡ್ಡ ಯಜಮಾನರಾಗಿ ಯಶಸ್ವಿಯಾಗಿ ಸೇವೆ ಸಲ್ಲಿಸಿದ್ದ ಚಿಕ್ಕಮಾಳಿಗೆ ಅವರ ಕಾರ್ಯಾ ವೈಖರಿಗೆ ಮೆಚ್ಚುಗೆ ನೀಡಿದ್ದ ಹಿರಿಯ ಮುಖಂಡರು, ನಂತರ 2016ರಿಂದ 2019ರವರೆಗೆ 2ನೇ ಬಾರಿಗೆ ಹಾಗೂ 2022ರಲ್ಲಿ 3ನೇ ಅವದಿಗೆ ಮತ್ತೊಮ್ಮೆ ಆಯ್ಕೆಯಾಗಿದ್ದರು.
ಈ ನಡುವೆ ಯುಗಾದಿ ಹಬ್ಬದ ಮಾರನೇ ದಿನ ಭೀಮನಗರದ ಬಸವನಗುಡಿ ದೇಗುಲದಲ್ಲಿ ಸಾಂಪ್ರಾದಾಯದAತೆ ಆರಂಭವಾದ ಕಸಬಾ ಮನೆ ಯಜಮಾನರ ಬದಲಾವಣೆ ಪ್ರಕ್ರಿಯೆಗಳ ಹಿನ್ನೆಲೆಯಲ್ಲಿ ಶನಿವಾರ ಪನ್ನಾಬೀದಿಯಲ್ಲಿ ಹಿರಿಯರು ನಡೆಸಿದ ಸಭೆಯಲ್ಲಿ ದೊಡ್ಡಯಜಮಾನ ಸ್ಥಾನಕ್ಕೆ ಚಿಕ್ಕಮಾಳಿಗೆ ಅವರನ್ನು ಆಯ್ಕೆಗೊಳಿಸಿದ್ದು, ದಲಿತ ಸಮಾಜದ ಸರ್ವೋತೋಮುಖ ಅಭಿವೃದ್ಧಿಗೆ ಶ್ರಮಿಸಲು ಸಲಹೆ ನೀಡಿದ್ದಾರೆ.
ಸಭೆಯಲ್ಲಿ ಮಾಜಿ ದೊಡ್ಡ ಯಜಮಾನರಾದ ಸಿ.ಬಾಬು, ಮಾಜಿ ಯಜಮಾನರಾದ ನಟರಾಜು, ಯಜಮಾನ್ ಎಸ್.ರಾಜಶೇಖರಮೂರ್ತಿ, ಹಿರಿಯ ಮುಖಂಡರಾದ ಕುಮಾರಸ್ವಾಮಿ, ಜಾನ್ ಚಂದರ್, ದೀಪಕ್, ಪಶುಪತಿ, ಡಿ.ಪ್ರೇಮ್ ನಾಥ್, ಇಂದ್ರಜಿತ್, ಪ್ರವೀಣ್ ಸೇರಿ ಇತರರು ಇದ್ದರು.
13ಕೆಜಿಎಲ್-1
ಫೋಟೋ ಶೀರ್ಷಿಕೆ:
ಕೊಳ್ಳೇಗಾಲ ಭೀಮನಗರದ ಪನ್ನಾಬೀದಿ ಚಾವಡಿಯಲ್ಲಿ ಶನಿವಾರ ಕಸಬಾ ಮನೆ ದೊಡ್ಡ ಯಜಮಾನರ ಸ್ಥಾನಕ್ಕೆ ಪತ್ರಕರ್ತ ಚಿಕ್ಕಮಾಳಿಗೆ ಅವರನ್ನು ಹಿರಿಯ ಮುಖಂಡರು ಆಯ್ಕೆಗೊಳಿಸಿ ಪುಷ್ಪಮಾಲೆ ಹಾಕಿ ಶುಭಕೋರಿದರು.
13ಕೆಜಿಎಲ್-1.ಎ
ನೂತನ ದೊಡ್ಡ ಯಜಮಾನ ಚಿಕ್ಕಮಾಳಿಗೆ ಅವರ ಫೋಟೋ ಇದೆ.
Leave a comment