ಯಾರೇ ವ್ಯಕ್ತಿಯಿಂದ ಸಂಘಕ್ಕೆ ಬಾಕಿ ಇರುವ ಮೊಬಲಗಿನ ನಿರ್ಧರಣೆಯು, ಸಂಗತಿಯ ಅಥವಾ ಕಾನೂನಿನ ತೊಡಕಿನ ಪ್ರಶ್ನೆಗಳ ತೀರ್ಮಾನವನ್ನು ಅವಲಂಬಿಸಿದ್ದರೆ, ರಿಜಿಸ್ಟ್ರಾರನು ಅದನ್ನು ೭೦ನೇ ಪ್ರಕರಣದ ಮೇರೆಗೆ ತೀರ್ಮಾನಕ್ಕಾಗಿ ತನಗೆ ಉಲ್ಲೇಖಿಸಿದ ಠೇವಣಿಯಾಗಿದ್ದರೆ ಹೇಗೋ ಹಾಗೆ ೭೧ನೇ ಪ್ರಕರಣದ ಉಪಬಂಧಗಳ ಮೇರೆಗೆ ಆ ಪ್ರಕರಣವನ್ನು ವಿಲೆ ಮಾಡತಕ್ಕುದು. (೨) (೧) ನೇ ಉಪಪ್ರಕರಣದ ಮೇರೆಗೆ ರಿಜಿಸ್ಟ್ರಾರನು ನೀಡಿದ ಪ್ರಮಾಣಪತ್ರವು ಅಂತಿಮ ಮತ್ತು ನಿರ್ಣಾಯಕವಾಗಿರತಕ್ಕುದು. ಬಾಕಿಯಾಗಿರುವುದಾಗಿ ಅದರಲ್ಲಿ ಹೇಳಲಾದ ಬಾಕಿಗಳು ಭೂ ಕಂದಾಯದ ಬಾಕಿಗಳಂತೆ ಅಥವಾ ೧೦೧ನೇ ಪ್ರಕರಣದಲ್ಲಿ ಉಪಬಂಧಿಸಿದ ಪ್ರಕ್ರಿಯೆಗೆ ಅನುಸಾರವಾಗಿ ವಸೂಲೀಯವಾಗಿರತಕ್ಕುದು: ಪರಂತು, ರಿಜಿಸ್ಟ್ರಾರನು ತಾನಾಗಿಯೇ ಅಥವಾ ಸಂಘವು ಅಥವಾ ಆ ಪ್ರಮಾಣಪತ್ರದಿಂದ ಬಾಧಿತನಾದ ಸದಸ್ಯನು ಅರ್ಜಿ ಸಲ್ಲಿಸಿದ ಮೇಲೆ ಅಂಥ ಪ್ರಮಾಣಪತ್ರದಲ್ಲಿನ ಯಾವುದೇ ತಪ್ಪನ್ನು ಸರಿಪಡಿಸಬಹುದು. (೩) ಡೆಪ್ಯುಟಿ ಕಮಿಷನರನು, ಸಂಘಕ್ಕೆ ಸಲ್ಲತಕ್ಕ ಬಾಕಿಗಳನ್ನು, ಬಡ್ಡಿಯ ಮತ್ತು ಅಂಥ ಬಾಕಿ ಗಳ ವಸೂಲಿಗಾಗಿ ವಹಿಸಿದ ಯಾವುದೇ ಆನುಷಂಗಿಕ ಚಾರ್ಜುಗಳ ಸಹಿತ ಸಂದಾಯ ಮಾಡುವವರೆಗೆ ಅಥವಾ ಅಂಥ ಬಾಕಿಗಳ ಸಂದಾಯಕ್ಕಾಗಿ ರಿಜಿಸ್ಟ್ರಾರನಿಗೆ ಮನ ದಟ್ಟಾಗುವ ಭದ್ರತೆಯನ್ನು ಒದಗಿಸುವವರೆಗೆ, ಕರ್ನಾಟಕ ಭೂ ಕಂದಾಯ ಅಧಿನಿಯಮ, ೧೯೬೪ರ ೧೮೮ನೇ ಪ್ರಕರಣದ ಮೂಲಕ ಅಧಿಕೃತಗೊಳಿಸಿದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು