ಸಚಿವ ಚೆಲುವರಾಯಸ್ವಾಮಿ
ಮಂಡ್ಯ: ಕೃಷ್ಣರಾಜಸಾಗರ ಜಲಾಶಯದಿಂದ ವಿಶ್ವೇಶ್ವರಯ್ಯ ನಾಲೆಗೆ ನೀರು ಹರಿಸಲು ಸದ್ಯದ ಪರಿಸ್ಥಿತಿಯಲ್ಲಿ ಸಾಧ್ಯ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್ ಚೆಲುವರಾಯಸ್ವಾಮಿ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾಲ್ಕೈದು ದಿನ, ಒಂದು ವಾರ ನಾಲೆಗಳಿಗೆ ನೀರು ಹರಿಸಿದರೆ ಅದು ತಳ ಮಟ್ಟದ ವರಗೆ ಹೋಗುವುದು ಸಾಧ್ಯವಿಲ್ಲ, ಬಿರು ಬೇಸಿಗೆಯಲ್ಲಿ ನೀರು ಆವಿಯಾಗಲಿದೆ ಜೊತೆಗೆ ಭೂಮಿಯಲ್ಲ ಒಣಗಿದ್ದು ಅಂತಹ ಪ್ರದೇಶಕ್ಕೆ ನೀರು ತಲುಪುವುದಿಲ್ಲ, ತಿಂಗಳ ಗಟ್ಟಲೆ ನೀರು ಹರಿಸಿದರು ಕೊನೆಯ ಭಾಗಕ್ಕೆ ನೀರು ತಲುಪದಿರುವುದನ್ನು ನೋಡಿದ್ದೇವೆ ಎಂದರು.
ನಾಲೆ ಆಧುನಿಕರಣ ಕಾಮಗಾರಿ ನಡೆಯುತ್ತಿದೆ. ಬೇಕಾದರೆ ಕಾಮಗಾರಿ ನಿಲ್ಲಿಸಿ ನೀರು ಹರಿಸಬಹುದು ಆದರೆ ವಾಸ್ತವ ಪರಿಸ್ಥಿತಿ ಬೇರೆ ಇದೆ ರೈತರು ಇದನ್ನು ಅರ್ಥ ಮಾಡಿಕೊಳ್ಳಬೇಕು, ಮಳೆಯನ್ನು ನಂಬಿದ್ದೇವೆ, 20ರ ನಂತರ ಮಳೆಯಾಗುವ ಮುನ್ಸೂಚನೆ ಇದ್ದು, ವರುಣನ ಕೃಪೆಯಿಂದ ಸಂಕಷ್ಟ ಪರಿಸ್ಥಿತಿ ದೂರ ಆಗಲಿ ಎಂದು ಆಶಿಸಿದರು.