ಚಿಕ್ಕಬಳ್ಳಾಪುರ: ದಲಿತ ಸಮುದಾಯದ ಮೇಲೆ ವಿಶೇಷ ಕಾಳಜಿ ಹೊಂದಿರುವ ಡಾ.ಕೆ.ಸುಧಾಕರ್ ಅವರನ್ನು ಈ ಚುನಾವಣೆಯಲ್ಲಿ ಗೆಲ್ಲಿಸಿ ಸಂಸದರಾನ್ನಾಗಿ ಮಾಡುವುದು ನಮ್ಮೆಲ್ಲರ ಗುರಿಯಾಗಿದೆ ಎಂದು ಮಾಜಿ ಶಾಸಕ ಎಂ.ಶಿವಾನಂದ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚಿಕ್ಕಬಳ್ಳಾಪುರದಲ್ಲಿ ಡಾ.ಕೆ.ಸುಧಾಕರ್ ಸರ್ವಜನಾಂಗದ ಅಭಿವೃದ್ಧಿಗಾಗಿ ಸಾಕಷ್ಟು ಶ್ರಮಿಸಿದ್ದಾರೆ. ವಿಶೇಷವಾಗಿ ದಲಿತ ಸಮುದಾಯದ ಏಳಿಗೆಗಾಗಿ ಕೆಲಸ ಮಾಡಿದ್ದಾರೆ. ಅವರು ಯಾವೊಬ್ಬ ದಲಿತರ ಮೇಲೆ ಕೇಸ್ ಹಾಕಿಲ್ಲ, ದೂರು ನೀಡಿಲ್ಲ ಎಂದು ಹೇಳಿದರು.
ದಲಿತ ಸಮುದಾಯಕ್ಕಾಗಿ ಸಮುದಾಯವನ್ನು ಮುನಿಸಿಪಾಲ್ ಕಾಲೇಜು ಬಳಿ ಮಂಜೂರು ಮಾಡಿಸಿದ್ದಾರೆ. ಅದರಂತೆ ಎಲ್ಲ ಸಮುದಾಯಗಳಿಗೂ ಸಮುದಾಯದ ಭವನಗಳ ನಿರ್ಮಾಣಕ್ಕೆ ಆದ್ಯತೆ ನೀಡಿದ್ದಾರೆ. ಅಲ್ಲದೆ ದಲಿರಿಗೆ ಅಧಿಕಾರ ಹಾಗೂ ಸೂಕ್ತ ಸ್ಥಾನಮಾನ ನೀಡಿದ್ದಾರೆ. ದಲಿತರಿಗೆ ಹಲವು ಸೌಲಭ್ಯ ಒದಗಿಸಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ಪಕ್ಷಬೇಧ ಮಾಡಿಲ್ಲ. ಲೋಕಲ್ ಸುಧಾಕರ್ ಅವರನ್ನು ಅಭ್ಯರ್ಥಿ ಲೋಕಸಭೆಯ ಚುನಾವಣೆಯಲ್ಲಿ ಗೆಲ್ಲಿಸಿ ಸಂಸದರನ್ನಾಗಿ ಮಾಡಲಾಗುವುದು ಎಂದರು.
ದಲಿತ ಮುಖಂಡ ಬಾಲಕುಂಟಹಳ್ಳಿ ಬಿ.ಎನ್.ಗಂಗಾಧರ್ ಮಾತನಾಡಿ, ಡಾ.ಕೆ.ಸುಧಾಕರ್ ಕ್ಷೇತ್ರದಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣಕ್ಕಾಗಿ ಅವರು ತಮ್ಮ ಶಾಸಕ ಸ್ಥಾನವನ್ನೇ ತ್ಯಾಗ ಮಾಡಿದವರು. ಅಭಿವೃದ್ಧಿಗೆ ಪಣ ತೊಟ್ಟು ಅನೇಕ ಯೋಜನೆಗಳು, ಕಾರ್ಯಕ್ರಮಗಳನ್ನು ಕ್ಷೇತ್ರದ ಜನತೆಗೆ ನೀಡಿದ್ದಾರೆ ಎಂದರು.
ಸುಧಾಕರ್ ಅವರು ಅಧಿಕಾರದಲ್ಲಿದ್ದಾಗ ನಮ್ಮ ದಲಿತ ಸಮುದಾಯದ ಹಲವು ಮುಖಂಡರಿಗೆ ಒಳ್ಳೆಯ ಸ್ಥಾನಮಾನ ಕೊಟ್ಟು ಬೆಳೆಸಿದ್ದಾರೆ. ಹಿಂದಿನಿಂದಲೂ ಕಾಂಗ್ರೆಸ್ನವರು ಜಾತಿಗಳ ನಡುವೆ ವಿಷ ಬೀಜ ಬಿತ್ತಿ ದಲಿತರನ್ನು ಹೊಡೆದು ಆಳುವ ನೀತಿಯನ್ನೇ ಅನುಸರಿಕೊಂಡೆ ಬಂದಿದೆ. ಕಳೆದ ವಷÀðದಿಂದ ಕ್ಷೇತ್ರದಲ್ಲಿ ಏನು ಕೆಲಸಗಳಾಗಿವೆ ಎಂಬುದರ ಬಗ್ಗೆ ಜನರಿಗೆ ಅರಿವಿದೆ. ದಲಿತ ಸಮುದಾಯವು ಸುಧಾಕರ್ ಪರವಾಗಿದೆ. ನಾವೆಲ್ಲ ಸುಧಾಕರ್ ಅವರನ್ನು ಬೆಂಬಲಿಸುತ್ತೇವೆ ಎಂದು ನುಡಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೆ.ಟಿ.ಕೃಷ್ಣಮೂರ್ತಿ ಮಾತನಾಡಿ, ಡಾ.ಕೆ.ಸುಧಾಕರ್ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ವಿವಿಧ ಹುದ್ದೆಗಳಿಗೆ ದಲಿತ ಸಮುದಾಯದ ಮುಖಂಡರನ್ನು ನೇಮಿಸಿ ಗುರ್ತಿಸಿದ್ದಾರೆ. ಈಗ ಕಾಂಗ್ರೆಸ್ನಲ್ಲಿರುವ ಶೇ.೯೯ ರಷ್ಟು ಮುಖಂಡರು ಡಾ.ಕೆ.ಸುಧಾಕರ್ರಿಂದ ಅನುಕೂಲ ಪಡೆದಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಅವರನ್ನು ವೈಯಕ್ತಿಕವಾಗಿ ನಿಂದಿಸುವುದು ಸರಿಯಲ್ಲ ಎಂದು ಎಚ್ಚರಿಕೆ ನೀಡಿದರು.
ನಗರಸಭೆ ಸದಸ್ಯ ಸತೀಶ್, ಮುನಿರಾಜು, ಸಿಂಧೂರ್, ತರಕಾರಿ ವೆಂಕಟೇಶ್, ಎಂ.ಮುನಿರಾಜು ಇದ್ದರು.