* ಶಾಸಕ ಅನಿಲ್ ಚಿಕ್ಕಮಾದು ಹೇಳಿಕೆ
ಕೋಟೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಪ್ರಚಾರ ಸಭೆ
ಪ್ರತಿನಿಧಿ ವರದಿ ಎಚ್ ಡಿ ಕೋಟೆ
ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳ ಸದುಪಯೋಗವನ್ನು ನಾವು ಪಡೆದುಕೊಳ್ಳುತ್ತಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನಪರ ಕಾರ್ಯಕ್ರಮಗಳನ್ನು ಒಪ್ಪಿಕೊಂಡಿದ್ದೇವೆ. ಹಾಗಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಸುನೀಲ್ ಬೋಸ್ ಅವರಿಗೆ ಹೆಚ್ಚು ಮತಗಳನ್ನು ನೀಡಬೇಕು ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.
ತಾಲೂಕಿನ ಕಂದೇಗಾಲ ಹಂಚೀಪುರ, ಮುಳ್ಳೂರು, ಕೆ ಬೆಳತ್ತೂರು ಜಿಲ್ಲಾ ಪಂಚಾಯಿತಿ ಕ್ಷೇತ್ರದ ವ್ಯಾಪ್ತಿಯ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸಭೆಯಲ್ಲಿ ಮಾತನಾಡಿದರು. ಕಳೆದ ಹತ್ತು ವರ್ಷಗಳ ಹಿಂದೆ ಬಿಜೆಪಿ ಸರ್ಕಾರ ಬಿಡುಗಡೆ ಮಾಡಿದ ಪ್ರಣಾಳಿಕೆಯನ್ನು ಜಾರಿಗೊಳಿಸದೆ ಇದ್ದರೂ ಸಹ, ಈ ಬಾರಿಯೂ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.ಇದು ಹಾಸ್ಯಾಸ್ಪದ ಎಂದರು.
ಕೇಂದ್ರದಲ್ಲಿ ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಡವರಿಗೆ ಡಬಲ್ ಗ್ಯಾರಂಟಿ ಯೋಜನೆಗಳನ್ನು ದೊರಕಲಿವೆ. ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುನೀಲ್ ಬೋಸ್ ಅವರನ್ನು ಆಯ್ಕೆ ಮಾಡಬೇಕು ನಮ್ಮ ಕ್ಷೇತ್ರದಿಂದ ಹೆಚ್ಚು ಮತಗಳನ್ನು ನೀಡಬೇಕು ಎಂದು ತಿಳಿಸಿದರು.
ಸುನೀಲ್ ಬೋಸ್ ಮಾತನಾಡಿ, ಎಲ್ಲಾ ಜಾತಿ, ಎಲ್ಲಾ ಧರ್ಮಗಳ ಹಿತ ಕಾಯುವ ಪಕ್ಷ ಕಾಂಗ್ರೆಸ್. ಕಳೆದ ಹತ್ತು ವರ್ಷಗಳಿಂದ ಬಿಜೆಪಿ ಸರ್ಕಾರ ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಹತ್ತು ವರ್ಷದಿಂದ ಯಾವುದೇ ಕೆಲಸವನ್ನು ಮಾಡದೇ ಹಿಂದುತ್ವ, ಮೋದಿ ಎಂದು ಬೊಬ್ಬೆ ಹೊಡೆಯುತ್ತಾರೆ. ಪ್ರತಿಯೊಂದು ಪದಾರ್ಥದಗಳ ಬೆಲೆ ಗಗನಕೇರಿದೆ. ಬಡ ಜನರು ನೆಮ್ಮದಿಯಿಂದ ಜೀವನ ಮಾಡಬೇಕಾದರೆ ದೇಶದಲ್ಲಿ ಕಾಂಗ್ರೆಸ್ ಸರ್ಕಾರ ಬರಬೇಕು ಎಂದರು.
ವಿವಿಧ ಪಕ್ಷಗಳ ತೊರೆದು ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು ಕಾರ್ಯಕ್ರಮದಲ್ಲಿ ಮಾಜಿ ಮಂತ್ರಿ ಕೋಟೆ ಎಂ. ಶಿವಣ್ಣ, ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷ ವಿಜಯಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾದಪ್ಪ, ಏಜಾಷಾ ಪಾಷಾ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರು ಎಚ್.ಸಿ. ಮಂಜುನಾಥ್, ಚಿಕ್ಕವಿರನಾಯಕ, ನಂದಿನಿ ಚಂದ್ರಶೇಖರ್, ಭಾಗ್ಯಲಕ್ಷ್ಮಿ, ಯೂತ್ ಅಧ್ಯಕ್ಷ ಕಂದೇಗಾಲ ಶಿವರಾಜು, ನರಸೀಪುರ ರವಿ, ಗ್ರಾಪಂ ಸದಸ್ಯರು ಕುರ್ಣೇಗಾಲ ಬೆಟ್ಟಸ್ವಾಮಿ, ನಂಜಯ್ಯ, ಎಚ್. ಸಿ. ನರಸಿಂಹಮೂರ್ತಿ, ಚಿಕ್ಕಶಂಭೆಗೌಡ , ಬಸವರಾಜು, ಶಿವಶಂಕರ್, ಲೋಕೇಶ್, ಪ್ರಕಾಶ್, ರವಿ ಬಸಾಪುರ, ಸಿದ್ದರಾಮೇಗೌಡ, ಹೇಮಂತ್, ಆಟೋ ಕುಮಾರ್, ಉಮೇಶ್, ಶಿವರಾಜು, ಭಾಗ್ಯ ಕೆಂಪಸಿದ್ದ, ಶಿವಲಿಂಗಯ್ಯ, ಶಿವಚನ್ನ, ಗಂಗಾಧರ್, ಪಕ್ಷದ ಪ್ರಧಾನ ಕಾರ್ಯದರ್ಶಿ ಚೆಲುವರಾಜು, ಟೌನ್ ಅಧ್ಯಕ್ಷ ನಾಗರಾಜು, ನಾಮಧಾರಿಗೌಡ ಸಮುದಾಯ ಸಂಘದ ತಾಲೂಕು ಅಧ್ಯಕ್ಷ ಭೀಮರಾಜು, ಚಿಕ್ಕಣ್ಣ ಬಿರ್ವಾಳ್ ,ಶಂಭುಲಿಂಗನಾಯಕ, ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ದರಾಜು, ಮುಖಂಡರು ಪುಟ್ಟಸ್ವಾಮಿ, ಪರಶಿವಮೂರ್ತಿ, ನಾಗರಾಜು ಮಣಿ, ನಾಗರಾಜು, ಮಣಿಕಂಠ, ನಟರಾಜು, ಕ್ಯಾತನಹಳ್ಳಿ ನಾಗರಾಜು, ರಾಜನಾಯಕ, ಮರಿದೇವಯ್ಯ, ಬಸವರಾಜು, ಗುರುಸ್ವಾಮಿ, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಹೂವಿನಕೊಳ ಸಿದ್ಧರಾಜು, ಸೋಮಶೇಖರ್, ಪ್ರಭುಸ್ವಾಮಿ, ಕೆಂಡಗಣ್ಣಸ್ವಾಮಿ, ಮಂಜುನಾಥ್, ನಾಗರಾಜು, ಕುಮಾರ್, ಪುಟ್ಟಸ್ವಾಮಿ, ರಾಜೇಶ್, ಪ್ರಭು, ಚಿನ್ನಯ್ಯ,ಇನ್ನೂ ಮುಖಂಡರು ಸೇರಿದಂತೆ ಭಾಗಿಯಾಗಿದ್ದರು.