ಚಿಕ್ಕಬಳ್ಳಾಪುರ ಲೋಕಸಭಾ ಅಭ್ಯರ್ಥಿ ರಕ್ಷಾ ರಾಮಯ್ಯ ಪರವಾಗಿ ಮಹಿಳೆಯರಿಂದ ಮತಯಾಚನೆ
ದೇವನಹಳ್ಳಿ:ಚಿಕ್ಕಬಳ್ಳಾಪುರ ಲೋಕಸಭಾ ಅಭ್ಯರ್ಥಿ ರಕ್ಷಾ ರಾಮಯ್ಯ ಪರವಾಗಿ ಕಾಂಗ್ರೇಸ್ ಪಕ್ಷದ ತಾಲೂಕು ಘಟಕದ ಮಹಿಳೆಯರಿಂದ ದೇವನಹಳ್ಳಿ ಪಟ್ಟಣದ 14 ಮತ್ತು 17 ವಾರ್ಡಿನಲ್ಲಿ ಭರ್ಜರಿ ಪ್ರಚಾರ ಮಾಡುವುದರ ಮೂಲಕ ಮಹಿಳೆಯರು ಮತಯಾಚನೆ ಮಾಡಿದರು.
ದೇವನಹಳ್ಳಿ ಪಟ್ಟಣದ ಬೂತ್ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳ ಕುರಿತು ಮನೆ-ಮನೆಗೂ ತೆರಳಿ ಮತದಾರರಿಗೆ ಅರಿವು ಮೂಡಿಸಿ ಕಾಂಗ್ರೆಸ್ ಗೆ ಮತ ನೀಡುವುದರ ಮೂಲಕ ಗೆಲುವು ಸಾಧಿಸಲು ಬೆಂಬಲಿಸಿ ಎಂದು ಮಹಿಳೆಯರು ಮತಯಾಚಿಸಿದರು.
ಈ ವೇಳೆಯಲ್ಲಿ ಮಹಿಳಾ ತಾಲೂಕು ಅಧ್ಯಕ್ಷೆ ರಾಧ ರೆಡ್ಡಿ ಮಾತನಾಡಿ ರೈತರ ಸಾಲ ಮನ್ನಾ ಮಾಡತ್ತೀವಿ ಅಂದ ಕೇಂದ್ರ ಸರ್ಕಾರ ಮಾಡಲಿಲ್ಲಾ ನಾವು ಜನರಿಗೆ ಏನು ಮಾತು ಕೊಟ್ಟಿದ್ದವಿ ಅದನ್ನು ನೆರವೇರಿಸಿದ್ದೀವಿ.ನಮ್ಮ ಕರ್ನಾಟಕ ರಾಜ್ಯದ ಕಾಂಗ್ರೆಸ್ ಸರ್ಕಾರ ಎಲ್ಲಾ ವರ್ಗಗಳಿಗೂ ಸವಲತ್ತುಗಳನ್ನು ಕಲ್ಪಿಸಿದೆ ಹಾಗೂ ನಮ್ಮ ಮುಖಂಡರು ಪ್ರತಿಯೊಂದು ಬೂತ್ ನಲ್ಲಿಯೂ ಹೆಚ್ಚಿನ ಮತಗಳನ್ನು ನೀಡಿ ರಕ್ಷಾ ರಾಮಯ್ಯನವರನ್ನು ಗೆಲ್ಲಿಸಬೇಕು ದೇವನಹಳ್ಳಿ ಕ್ಷೇತ್ರದಿಂದ 25 ಸಾವಿರಕ್ಕೂ ಹೆಚ್ಚು ಮತಗಳ ಅಂತರದ ಲೀಡ್ ಕೊಡಿಸುವುದು ತಮ್ಮ ಕರ್ತವ್ಯ ಎಂದು ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ಮತದಾರರಲ್ಲಿ ಮನವಿ ಮಾಡಿದರು.
ಮಹಿಳಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮತ್ತು ದೇವನಹಳ್ಳಿ ಪಟ್ಟಣದ 14 ಮತ್ತು 17ನೇ ವಾರ್ಡಿನ ಮುಖ್ಯಸ್ಥೆ ಶಶಿಕಲಾ ಮಾತನಾಡಿ ಕಾಂಗ್ರೆಸ್ ಪಕ್ಷವು ಐದು ಗ್ಯಾರಂಟಿಗಳ ಜೊತೆಯಲ್ಲಿ ಇಪ್ಪತ್ತು ಗ್ಯಾರಂಟಿಗಳನ್ನು ನೀಡುತ್ತಿದೆ ಅದರಲ್ಲೂ ಮುಖ್ಯವಾಗಿ ರೈತರ ಸಾಲ ಮನ್ನಾ,
ಪ್ರತಿ ವರ್ಷ ಬಡ ಕುಟುಂಬದ ಮಹಿಳೆಗೆ 1 ಲಕ್ಷ ರೂ, ಶ್ರಮಿಕ ನ್ಯಾಯ ದಿನಕ್ಕೆ 400 ರೂ ಕನಿಷ್ಠ ವೇತನ, ಜಾತಿಗಣಿತಿಯಲ್ಲಿ ಪಾಲುದಾರಿಕೆಯ ಸಮಾನತೆ ನ್ಯಾಯ, ಪ್ರತಿಯೊಬ್ಬ ವಿದ್ಯಾವಂತ ಯುವಕನಿಗೆ 1 ಲಕ್ಷ ರೂ ವೇತನ ಹೀಗೆ ಹಲವಾರು ಯೋಜನೆಗಳು ನೀಡಲಾಗುತ್ತದೆ ಎಲ್ಲಾ ವರ್ಗಗಳ ಉತ್ತಮ ಬೆಳವಣಿಗೆಗೆ ಅವಶ್ಯಕವಾದ ಯೋಜನೆಗಳನ್ನು ರೂಪಿಸಿದೆ ಹಾಗಾಗಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಲು ಬಹುಮತಗಳ ಅವಶ್ಯಕತೆ ಇದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ರಾಜ್ಯ ಕಾರ್ಯದರ್ಶಿ ಮಮತಾ ,ಸಂಘಟನಾ ಕಾರ್ಯದರ್ಶಿ ಚಂದ್ರಕಲಾ ,ಭಾರತಿ, ಚಂದ್ರಕಲಾ, ಮಹಿಳಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರತ್ನ ,ಜಿಲ್ಲಾ ಕಾರ್ಯದರ್ಶಿ ಸರಸ್ವತಿ ,ದೇವನಹಳ್ಳಿ ಟೌನ್ ಅಧ್ಯಕ್ಷೆ ಜ್ಯೋತಿ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಮಾಧವಿ ಕಾಂತರಾಜು , ಸದಸ್ಯರುಗಳಾದ ಉಷಾ, ಪುಷ್ಪ, ಪಾರ್ವತಿ ಇದ್ದರು.
17ಡಿಎಚ್ಎಲ್ ಪಿ-೨
ದೇವನಹಳ್ಳಿ ಪಟ್ಟಣದ ಬೂತ್ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳ ಕುರಿತು ಮನೆ-ಮನೆಗೂ ತೆರಳಿ ಮತದಾರರಿಗೆ ಅರಿವು ಮೂಡಿಸಿ ಕಾಂಗ್ರೆಸ್ ಗೆ ಮತ ನೀಡುವುದರ ಮೂಲಕ ಗೆಲುವು ಸಾಧಿಸಲು ಬೆಂಬಲಿಸಿ ಎಂದು ಮಹಿಳೆಯರು ಮತಯಾಚಿಸಿದರು.