ಪ್ರತಿನಿಧಿ ವರದಿ ಸರಗೂರು
ಸರಗೂರು ಪಟ್ಟಣದ ಚೌಡೇಶ್ವರಿ ಅಮ್ಮನವರ ದೇವಾಲಯದಲ್ಲಿ ಶ್ರೀರಾಮ ಸೇವಾ ಸಮಿತಿ ವತಿಯಿಂದ ಶ್ರೀ ರಾಮನ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಶ್ರೀ ರಾಮನವಮಿ ಪೂಜಾ ಮಹೋತ್ಸವನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು.
ದೇವಸ್ಥಾನವನ್ನು ತಳಿರು ತೋರಣ, ರಂಗೋಲಿ ಬಿಡಿಸಿ ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಿ, ಹೂವಿನ ಹಾರದಿಂದ ದೇವಸ್ಥಾನ ಸುತ್ತಮುತ್ತ ಅಲಂಕಾರ ಮಾಡಿದ್ದರು.
ಶ್ರೀ ರಾಮನ ಮಂಟಪದ ಮುಂದೆ ಬೆಳಗ್ಗೆ 6 ಗಂಟೆಗೆ ಗಣಪತಿ ಪೂಜೆ, ಕಳಸ ಸ್ಥಾಪನೆ, ಪುಣ್ಯಾಹ, ಗಣ ಹೋಮ, ನವಗ್ರಹ ಹೋಮ , ಪೂರ್ಣಹುತಿ ಹಾಗೂ ಮಧ್ಯಾಹ್ನ 1.30ಕ್ಕೆ ಮಹಾಮಂಗಳಾರತಿ ಮಾಡಲಾಯಿತು. ನಂತರ ದೇವಲಾಯಕ್ಕೆ ಆಗಮಿಸಿದ ಭಕ್ತರಿಗೆ ಕೋಸಂಬರಿ ಮಜ್ಜಿಗೆ ಮತ್ತು ಪಾನಕಗಳನ್ನು ಹಂಚಲಾಯಿತು.
ನಂತರ ಅರ್ಚಕರಾದ ಗೋಪಿನಾಥ್ ಮಾತನಾಡಿ, ಹಿಂದುಗಳ ಹೃದಯ ಸಾಮ್ರಾಟ, ಮರ್ಯಾದ ಪುರುಷೋತ್ತಮ, ದಶರಥ ನಂದನ , ಶ್ರೀರಾಮ ಹುಟ್ಟಿದ ದಿನವನ್ನು ಶ್ರೀರಾಮನವಮಿ ಹಬ್ಬವೆಂದು ಆಚರಣೆ ಮಾಡಲಾಗುತ್ತಿದ್ದು, ಸಕಲ ಹಿಂದೂ ಧರ್ಮ ಸಂಜಾತರಿಗೂ ಭಾರತದಲ್ಲಿ ಒಂದು ಜನಪ್ರಿಯ ಧಾರ್ಮಿಕ ಹಬ್ಬವಾಗಿದೆ. ರಾಮನವಮಿ ಹಬ್ಬವನ್ನು ಚೈತ್ರ ಮಾಸದ 9ನೇ ದಿನದಂದು ಆಚರಣೆ ಮಾಡಲಾಗುತ್ತದೆಎಂದು ಹೇಳಿದರು.
ತೊಗಟವೀರ ಕ್ಷತ್ರಿಯ ಸಮಾಜ ಮತ್ತು ಕುಲಬಾಂಧವರು , ಹಾಗೂ ಯುವಕ ಸಂಘದವರು ಪೂಜಾ ಮಹೋತ್ಸವದಲ್ಲಿ ಭಾಗವಹಿಸಿದ್ದರು.